‘ಹಳಿಗೆ ಇಳಿದಿದ್ದ ಸಿಬ್ಬಂದಿ, ಯುವಕನನ್ನು ಬೆನ್ನಟ್ಟಿ ಹಿಡಿದಿದ್ದರು. ಮಧ್ಯಾಹ್ನ 3.27 ಗಂಟೆ ನಂತರ ವಿದ್ಯುತ್ ಸಂಪರ್ಕ ಪುನಃ ನೀಡಲಾಯಿತು. ನಂತರವೇ, ರೈಲುಗಳ ಸಂಚಾರ ಆರಂಭವಾಯಿತು. ಯುವಕನ ಕೃತ್ಯದಿಂದ ನಷ್ಟವಾಗಿದೆ. ಯುವಕನ ಉದ್ದೇಶವೇನು? ಇದು ಆಕಸ್ಮಿಕವೋ ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ತಿಳಿಸಿವೆ.