<p><strong>‘ತಾರ’ ನಾಟಕ ಪ್ರದರ್ಶನ</strong></p>.<p>ಬೆಂಗಳೂರು: ಅಭಿನಯ ತರಂಗ ತಂಡವು ಇದೇ 13ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ‘ತಾರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಮಹೇಶ್ ದತ್ತಾನಿ ಅವರ ಈ ನಾಟಕವನ್ನು ರಾಘವೇಂದ್ರ ಜಿ. ಅವರು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದ್ದಾರೆ. ಈ ನಾಟಕದ ಟಿಕೆಟ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.</p>.<p>****</p>.<p><strong>‘ಸುರ್ ಸಂಧ್ಯಾ’ ಸಂಗೀತ</strong> </p>.<p>ಬೆಂಗಳೂರು: ಕ್ಯಾನ್ಸರ್ಪೀಡಿತ ಬಡ ರೋಗಿಗಳ ಚಿಕಿತ್ಸೆಗೆ ನೆರವಾಗಲು ಎಚ್ಸಿಜಿ ಫೌಂಡೇಷನ್ ಸಹಯೋಗದಲ್ಲಿ ಸಂಧ್ಯಾ ಎಸ್. ಕುಮಾರ್ ಅವರು ಇದೇ 14ರಂದು ಸಂಜೆ 6 ಗಂಟೆಯಿಂದ ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ನಲ್ಲಿ ‘ಸುರ್ ಸಂಧ್ಯಾ’ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. </p>.<p>ಬಾಲಿವುಡ್ ಗಾಯಕಿ ಕವಿತಾ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ. ಜನಪ್ರಿಯ ಹಳೆಯ ಚಿತ್ರಗೀತೆಗಳನ್ನು ಅವರು ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಸಂಗೀತ ಪಯಣವನ್ನೂ ಸ್ಮರಿಸಿಕೊಳ್ಳಲಿದ್ದು, ಅವರೊಂದಿಗೆ ಧ್ವನಿ ಕಲಾವಿದ ಹರೀಶ್ ಭಿಮಾನಿ ಸಂವಾದ ನಡೆಸಲಿದ್ದಾರೆ. ಮೂರು ಗಂಟೆಗೂ ಹೆಚ್ಚು ನಡೆಯುವ ಈ ಕಾರ್ಯಕ್ರಮದಲ್ಲಿ ಗಾಯಕರಾದ ನಾಗಚಂದ್ರಿಕಾ ಭಟ್, ಸಮನ್ವಿತಾ ಶರ್ಮಾ, ಶ್ರುತಿ ಭಿಡೆ, ಆರೋಹ್ ಶಂಕರ್ ಹಾಗೂ ಸುರೋಜಿತ್ ಗುಹಾ ಅವರು ಭಾಗವಹಿಸಲಿದ್ದು, ವಿವಿಧ ಚಿತ್ರಗೀತೆಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ. </p>.<p>ಈ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಎಚ್ಸಿಜಿ ಫೌಂಡೇಷನ್ಗೆ ಒದಗಿಸಿ, ಕ್ಯಾನ್ಸರ್ಪೀಡಿತ ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ಒದಗಿಸಲು ಬಳಸಲಾಗುತ್ತದೆ. ಕಾರ್ಯಕ್ರಮದ ಟಿಕೆಟ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.</p>.<p>****</p>.<p><strong>ಸ್ವರ ಉತ್ಸವ</strong></p>.<p>ಬೆಂಗಳೂರು: ಸಪ್ತಕ ಬೆಂಗಳೂರು ಹಾಗೂ ಪುಣೆಯ ಮಿತ್ರಾ ಫೌಂಡೇಷನ್ ಜಂಟಿಯಾಗಿ ಇದೇ 15ರಂದು ಸಂಜೆ 5 ಗಂಟೆಗೆ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ‘ಸ್ವರ ಉತ್ಸವ’ ಹಮ್ಮಿಕೊಂಡಿದೆ. </p>.<p>ಪುಣೆಯ ಸಂತೂರ್ ವಾದಕ ಶಶಾಂಕ ಗೋಖಲೆ ಅವರಿಂದ ಸಂತೂರ್ ವಾದನ ನಡೆಯಲಿದೆ. ಸಂಜೀವ್ ಅಭ್ಯಂಕರ್ ಅವರಿಂದ ಗಾಯನ ನಡೆಯಲಿದ್ದು, ತಬಲಾದಲ್ಲಿ ಅಜಿಂಕ್ಯಾ ಜೋಶಿ, ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ ಇರಲಿದೆ. </p>.<p>****</p>.<p><strong>ಶಿವರಾತ್ರಿ ಸಂಗೀತ–ನೃತ್ಯ ಉತ್ಸವ</strong></p>.<p>ಬೆಂಗಳೂರು: ಶೃಂಗೇರಿ ಶಂಕರಮಠ, ಸೃಷ್ಟಿ ಕೇಂದ್ರ ಮತ್ತು ರೋಟರಿ ಡಿಸ್ಟ್ರಿಕ್ಟ್ 3191 ಜಂಟಿಯಾಗಿ ಇದೇ 15ರಂದು ಸಂಜೆ 6 ಗಂಟೆಯಿಂದ ಶಂಕರಪುರದ ಶೃಂಗೇರಿ ಮಠದಲ್ಲಿ ಅಹೋರಾತ್ರಿ ಶಿವರಾತ್ರಿ ಸಂಗೀತ–ನೃತ್ಯ ಉತ್ಸವ ಹಮ್ಮಿಕೊಂಡಿದೆ. </p>.<p>ರಾಜ ಅವರಿಂದ ವೃಂದ ನಾದಸ್ವರ, ಆರ್.ಕೆ. ಪದ್ಮನಾಭ, ನಾಗಮಣಿ ಶ್ರೀನಾಥ್, ಸುಮಾ ಸುಧೀಂದ್ರ, ವೇಣುಗೋಪಾಲ್, ಶಿವಶ್ರೀ ಸ್ಕಂದಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.</p>.<p>ಸೃಷ್ಟಿ ಕೇಂದ್ರ, ಶಿವಪ್ರಿಯ ನೃತ್ಯ ಶಾಲೆಯಿಂದ ನೃತ್ಯ ನಾಟಕ, ಸೌಮ್ಯ ಅವರಿಂದ ಒಡಿಸ್ಸಿ ನೃತ್ಯ, ನಾಟ್ಯತರಂಗ್ ತಂಡದಿಂದ ಕಥಕ್, ಮಧುರಾ ಮುಖರ್ಜಿ, ಮನೋಜ, ಐಶ್ವರ್ಯಾ ನಿತ್ಯಾನಂದ, ಸೃಷ್ಟಿ, ಅಕ್ಷತಾ ಮತ್ತು ಎ.ವಿ. ಸತ್ಯನಾರಾಯಣ ಅವರಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ತಾರ’ ನಾಟಕ ಪ್ರದರ್ಶನ</strong></p>.<p>ಬೆಂಗಳೂರು: ಅಭಿನಯ ತರಂಗ ತಂಡವು ಇದೇ 13ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ‘ತಾರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಮಹೇಶ್ ದತ್ತಾನಿ ಅವರ ಈ ನಾಟಕವನ್ನು ರಾಘವೇಂದ್ರ ಜಿ. ಅವರು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದ್ದಾರೆ. ಈ ನಾಟಕದ ಟಿಕೆಟ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.</p>.<p>****</p>.<p><strong>‘ಸುರ್ ಸಂಧ್ಯಾ’ ಸಂಗೀತ</strong> </p>.<p>ಬೆಂಗಳೂರು: ಕ್ಯಾನ್ಸರ್ಪೀಡಿತ ಬಡ ರೋಗಿಗಳ ಚಿಕಿತ್ಸೆಗೆ ನೆರವಾಗಲು ಎಚ್ಸಿಜಿ ಫೌಂಡೇಷನ್ ಸಹಯೋಗದಲ್ಲಿ ಸಂಧ್ಯಾ ಎಸ್. ಕುಮಾರ್ ಅವರು ಇದೇ 14ರಂದು ಸಂಜೆ 6 ಗಂಟೆಯಿಂದ ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ನಲ್ಲಿ ‘ಸುರ್ ಸಂಧ್ಯಾ’ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. </p>.<p>ಬಾಲಿವುಡ್ ಗಾಯಕಿ ಕವಿತಾ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ. ಜನಪ್ರಿಯ ಹಳೆಯ ಚಿತ್ರಗೀತೆಗಳನ್ನು ಅವರು ಹಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಸಂಗೀತ ಪಯಣವನ್ನೂ ಸ್ಮರಿಸಿಕೊಳ್ಳಲಿದ್ದು, ಅವರೊಂದಿಗೆ ಧ್ವನಿ ಕಲಾವಿದ ಹರೀಶ್ ಭಿಮಾನಿ ಸಂವಾದ ನಡೆಸಲಿದ್ದಾರೆ. ಮೂರು ಗಂಟೆಗೂ ಹೆಚ್ಚು ನಡೆಯುವ ಈ ಕಾರ್ಯಕ್ರಮದಲ್ಲಿ ಗಾಯಕರಾದ ನಾಗಚಂದ್ರಿಕಾ ಭಟ್, ಸಮನ್ವಿತಾ ಶರ್ಮಾ, ಶ್ರುತಿ ಭಿಡೆ, ಆರೋಹ್ ಶಂಕರ್ ಹಾಗೂ ಸುರೋಜಿತ್ ಗುಹಾ ಅವರು ಭಾಗವಹಿಸಲಿದ್ದು, ವಿವಿಧ ಚಿತ್ರಗೀತೆಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ. </p>.<p>ಈ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಎಚ್ಸಿಜಿ ಫೌಂಡೇಷನ್ಗೆ ಒದಗಿಸಿ, ಕ್ಯಾನ್ಸರ್ಪೀಡಿತ ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ಒದಗಿಸಲು ಬಳಸಲಾಗುತ್ತದೆ. ಕಾರ್ಯಕ್ರಮದ ಟಿಕೆಟ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯ.</p>.<p>****</p>.<p><strong>ಸ್ವರ ಉತ್ಸವ</strong></p>.<p>ಬೆಂಗಳೂರು: ಸಪ್ತಕ ಬೆಂಗಳೂರು ಹಾಗೂ ಪುಣೆಯ ಮಿತ್ರಾ ಫೌಂಡೇಷನ್ ಜಂಟಿಯಾಗಿ ಇದೇ 15ರಂದು ಸಂಜೆ 5 ಗಂಟೆಗೆ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ‘ಸ್ವರ ಉತ್ಸವ’ ಹಮ್ಮಿಕೊಂಡಿದೆ. </p>.<p>ಪುಣೆಯ ಸಂತೂರ್ ವಾದಕ ಶಶಾಂಕ ಗೋಖಲೆ ಅವರಿಂದ ಸಂತೂರ್ ವಾದನ ನಡೆಯಲಿದೆ. ಸಂಜೀವ್ ಅಭ್ಯಂಕರ್ ಅವರಿಂದ ಗಾಯನ ನಡೆಯಲಿದ್ದು, ತಬಲಾದಲ್ಲಿ ಅಜಿಂಕ್ಯಾ ಜೋಶಿ, ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ ಇರಲಿದೆ. </p>.<p>****</p>.<p><strong>ಶಿವರಾತ್ರಿ ಸಂಗೀತ–ನೃತ್ಯ ಉತ್ಸವ</strong></p>.<p>ಬೆಂಗಳೂರು: ಶೃಂಗೇರಿ ಶಂಕರಮಠ, ಸೃಷ್ಟಿ ಕೇಂದ್ರ ಮತ್ತು ರೋಟರಿ ಡಿಸ್ಟ್ರಿಕ್ಟ್ 3191 ಜಂಟಿಯಾಗಿ ಇದೇ 15ರಂದು ಸಂಜೆ 6 ಗಂಟೆಯಿಂದ ಶಂಕರಪುರದ ಶೃಂಗೇರಿ ಮಠದಲ್ಲಿ ಅಹೋರಾತ್ರಿ ಶಿವರಾತ್ರಿ ಸಂಗೀತ–ನೃತ್ಯ ಉತ್ಸವ ಹಮ್ಮಿಕೊಂಡಿದೆ. </p>.<p>ರಾಜ ಅವರಿಂದ ವೃಂದ ನಾದಸ್ವರ, ಆರ್.ಕೆ. ಪದ್ಮನಾಭ, ನಾಗಮಣಿ ಶ್ರೀನಾಥ್, ಸುಮಾ ಸುಧೀಂದ್ರ, ವೇಣುಗೋಪಾಲ್, ಶಿವಶ್ರೀ ಸ್ಕಂದಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.</p>.<p>ಸೃಷ್ಟಿ ಕೇಂದ್ರ, ಶಿವಪ್ರಿಯ ನೃತ್ಯ ಶಾಲೆಯಿಂದ ನೃತ್ಯ ನಾಟಕ, ಸೌಮ್ಯ ಅವರಿಂದ ಒಡಿಸ್ಸಿ ನೃತ್ಯ, ನಾಟ್ಯತರಂಗ್ ತಂಡದಿಂದ ಕಥಕ್, ಮಧುರಾ ಮುಖರ್ಜಿ, ಮನೋಜ, ಐಶ್ವರ್ಯಾ ನಿತ್ಯಾನಂದ, ಸೃಷ್ಟಿ, ಅಕ್ಷತಾ ಮತ್ತು ಎ.ವಿ. ಸತ್ಯನಾರಾಯಣ ಅವರಿಂದ ಭರತನಾಟ್ಯ ಹಮ್ಮಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>