‘ಆರೋಪಿಗಳಾದ ರಂಜಿತ್ ಹಾಗೂ ರಮೇಶ್, ಸಂಪಂಗಿರಾಮನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದಲ್ಲಿ ವಾಸವಿದ್ದರು. ಮೇ 9ರಂದು ಮದ್ಯದ ಅಮಲಿನಲ್ಲಿದ್ದ ಸತ್ಯ, ಕಟ್ಟಡಕ್ಕೆ ಹೋಗಿದ್ದರು. ಅದನ್ನು ಪ್ರಶ್ನಿಸಿದ್ದ ಆರೋಪಿಗಳು, ‘ಯಾರು ನೀನು? ಇಲ್ಲಿಗೆ ಏಕೆ ಬಂದಿದ್ದಿಯಾ?’ ಎಂಬುದಾಗಿ ವಿಚಾರಿಸಿದ್ದರು.’