‘ಮುರಳಿ ಹಾಗೂ ರಾಜು, ರಾತ್ರಿ ಮದ್ಯ ಕುಡಿದು ಮನೆಯತ್ತ ತೆರಳುತ್ತಿದ್ದರು. ರಾಜು ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಮುರಳಿ ಕುಳಿತಿದ್ದರು. ಮಾರ್ಗಮಧ್ಯೆ ಸವಾರನ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿತ್ತು. ಇಬ್ಬರೂ ರಸ್ತೆಗೆ ಬಿದ್ದಿದ್ದರು. ರಾಜು ಮಾತ್ರ ಮೇಲಕ್ಕೆ ಎದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮುರಳಿ ಮೇಲಕ್ಕೆ ಎದ್ದಿರಲಿಲ್ಲ.’