ಸ್ಫೋಟ ಪ್ರಕರಣದಲ್ಲಿ ಈತ 14ನೇ ಆರೋಪಿ. ಚಿನ್ನಸ್ವಾಮಿ ಕ್ರೀಡಾಂಗಣದ ಸ್ಫೋಟಕ್ಕೆ ದೆಹಲಿ, ಧನ್ಬಾಗ್ಗಳಲ್ಲಿ ಸಂಚು ರೂಪಿಸಿದ್ದು, ತುಮಕೂರಿನಲ್ಲಿ ಬಾಂಬ್ ತಯಾರಿಸಿದ್ದಾಗಿ ಈತ ಒಪ್ಪಿಕೊಂಡ ಬಳಿಕ ನ್ಯಾಯಾಧೀಶ ವೆಂಕಟೇಶ್ ಹುಲಗಿ ಶಿಕ್ಷೆ ವಿಧಿಸಿದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎ. ರವೀಂದ್ರ ವಾದಿಸಿದ್ದರು.