‘ಡಾ.ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ಬಿಎಂಶ್ರೀ ಅವರ ಕಂಚಿನ ಭಾವಶಿಲ್ಪವನ್ನು ಸ್ಥಾಪಿಸಲಾಗಿದೆ. ನಿರ್ಲಕ್ಷ್ಯ
ಕ್ಕೊಳಗಾಗಿದ್ದ ಸ್ಥಳಕ್ಕೆ ಈಗ ಸೌಲಭ್ಯ ಒದಗಿಸಿರುವುದು ಸ್ವಾಗತಾರ್ಹ. ಆದರೆ, ಈ ಕಾರ್ಯದ ಕೇಂದ್ರ ಬಿಂದುವಾದ ಬಿಎಂಶ್ರೀ ಅವರ ಭಾವ ಶಿಲ್ಪವು ವಿರೂಪಗೊಂಡಿದೆ. ಇದು ಯಾರ ಗಮನಕ್ಕೂ ಬರದಿರುವುದು ಆಶ್ಚರ್ಯವನ್ನುಂಟುಮಾಡಿದೆ. ಕಂಚಿನ ಭಾವ
ಶಿಲ್ಪಕ್ಕೆ ಯಾವ ಬಣ್ಣವನ್ನೂ ಬಳಿಯಬಾರದು. ಕಲಾಕೃತಿಯ ನಿರ್ವಹಣೆಯ ಸಂದರ್ಭದಲ್ಲಿ ಕಲಾವಿದರ ಸಲಹೆ ಪಡೆದು, ಮಾರ್ಪಾಡು ಮಾಡಬೇಕಾದದ್ದು ಪಾಲಿಕೆಯ ಜವಾಬ್ದಾರಿ. ಭಾವ ಶಿಲ್ಪಕ್ಕೆ ಕಟ್ಟಡ ಸಾಮಗ್ರಿಯ ಎನಾಮಲ್ ಬಣ್ಣ ಬಳಿದು, ಕೃತಿಯನ್ನು ಅಂದಗೆಡಿಸಿದ್ದಾರೆ’ ಎಂದು ಎಂ.ಎಸ್. ಮೂರ್ತಿ ತಿಳಿಸಿದ್ದಾರೆ.