ರಂಗಧಾಮ ಅವರು 2014ರಲ್ಲಿ ರಂಗಯ್ಯ ಎಂಬುವರಿಂದ ₹ 4 ಲಕ್ಷ ಸಾಲ ಪಡೆದು, ಸೆಂಟ್ರಿಂಗ್ ಶೀಟ್ ವ್ಯವಹಾರ ಮಾಡುತ್ತಿದ್ದರು. ವ್ಯವಹಾರ ದಲ್ಲಿ ₹ 7 ಲಕ್ಷ ನಷ್ಟವಾಗಿತ್ತು. ಸಾಲ ಪಡೆದಿದ್ದ ಹಣ ವಾಪಸು ಕೊಡುವಂತೆ ರಂಗಯ್ಯ ಒತ್ತಾಯಿಸುತ್ತಿದ್ದರು. ಸಾಲ ತೀರಿಸಲು ಸಾಧ್ಯವಾಗದ ಕಾರಣಕ್ಕೆ ರಂಗಧಾಮ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಹಾಯ ಕೇಳಲು ಬಂದಿದ್ದರು ಎನ್ನಲಾಗಿದೆ