‘ವೃದ್ಧಾಪ್ಯ ವೇತನ ಕೊಡಿಸುವುದಾಗಿ ಹೇಳಿದ್ದ ಅಪರಿಚಿತ, ನನ್ನ ಫೋಟೊ ತೆಗೆಸಬೇಕೆಂದು ಹೇಳಿ ಶಿವಾಜಿ ನಗರ ಬಸ್ ನಿಲ್ದಾಣ ಬಳಿ ಕರೆ ದೊಯ್ದಿದ್ದ. ಕೊರಳಲ್ಲಿದ್ದ ಚಿನ್ನದ ಸರಗಳು ಫೋಟೊದಲ್ಲಿ ಬಂದರೆ, ವೃದ್ಧಾಪ್ಯ ವೇತನ ಸಿಗುವುದಿಲ್ಲವೆಂದು ಹೇಳಿ ಬಿಚ್ಚಿಸಿಕೊಂಡಿದ್ದ. ಆಭರಣಗಳನ್ನು ತನ್ನ ಕಿಸೆಯಲ್ಲಿ ಇಟ್ಟುಕೊಂಡಿದ್ದ. ಛಾಯಾಗ್ರಾಹಕ ನನ್ನು ಕರೆತರುವುದಾಗಿ ಹೇಳಿ ಸ್ಥಳದಿಂದ ಹೊರಟು ಹೋದ ಆತ, ವಾಪಸ್ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.