‘ಎಸ್ಸೆಸ್ಸೆಲ್ಸಿವರೆಗೂ ಓದಿದ್ದ ಆರೋಪಿಗಳು, ಜನರನ್ನು ವಂಚಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಸರ್ಕಾರಿ ಕೆಲಸ, ವಿಧವಾ ವೇತನ, ಹಿರಿಯ ನಾಗರಿಕರ ವೇತನ, ಸಬ್ಸಿಡಿ ಸಾಲ, ಸರ್ಕಾರದ ಯೋಜನೆಗಳಡಿ ಕಾರು, ನಿವೇಶನ ಕೊಡಿಸುವ ಆಮಿಷವೊಡ್ಡುತ್ತಿದ್ದರು. ಶುಲ್ಕ ಹಾಗೂ ಇತರೆ ಖರ್ಚಿನ ಹೆಸರಿನಲ್ಲಿ ಜನರಿಂದ ಹಣ ಪಡೆದು ಆರೋಪಿಗಳು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.