ಈ ಸಂಬಂಧ ಚಂದ್ರಶೇಖರ್ ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ಎಸ್.ಬೀಳಗಿ ಮತ್ತು ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರಿದ್ದ ಪೀಠ ವಿಚಾರಣೆ ನಡೆಸಿ, ‘ಕಲ್ಯಾಣ ಮಂಟಪದ ಮಾಲೀಕರು ₹ 22 ಸಾವಿರ ಜಿಎಸ್ಟಿ ಪಾವತಿಸಿರುವ ಸಂಬಂಧ ದಾಖಲೆಗಳನ್ನು ಒದಗಿಸಿಲ್ಲ. ಆದ್ದರಿಂದ, ಶೇ 18ರಷ್ಟು ಮೊತ್ತ ಕಡಿತ ಮಾಡಿರುವುದು ನಿಯಮ ಬಾಹಿರ. ಕೇವಲ ಶೇ 10ರಷ್ಟು ಮಾತ್ರವೇ ಕಡಿತ ಮಾಡಬೇಕಿತ್ತು. ಹೀಗಾಗಿ, ಇನ್ನುಳಿದ ₹ 7,700 ಮೊತ್ತವನ್ನು ದೂರುದಾರರಿಗೆ ಹಿಂದಿರುಗಿಸಬೇಕು‘ ಎಂದು ದೂರನ್ನು ಭಾಗಶಃ ಪುರಸ್ಕರಿಸಿದೆ.