ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ, ‘ಏಪ್ರಿಲ್ 7ರಿಂದಲೇ ಮುಷ್ಕರ ನಡೆಸಬೇಕಿತ್ತು. ಆದರೆ, ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎ) ಮಾತುಕತೆಗೆ ಆಹ್ವಾನಿಸಿತ್ತು. ಬೇಡಿಕೆ ಈಡೇರಿಸಲು ಪ್ರಾಧಿಕಾರದ ಅಧಿಕಾರಿ ಗಳು ನಿರಾಕರಿಸಿದರು. ಹೀಗಾಗಿ, ಮುಷ್ಕರಕ್ಕೆ ದಿನಾಂಕ ನಿಗದಿಪಡಿಸಿದ್ದೇವೆ. ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ’ ಎಂದರು.