‘ರಾಜ್ಯ ಸರ್ಕಾರದ ಹಾಲಿ ವಿದ್ಯುತ್ ನೀತಿಗಳಿಂದ ಕೋಟ್ಯಂತರ ಕೃಷಿ ಪಂಪ್ಸೆಂಟ್ಗಳು, ಕುಟೀರ ಜ್ಯೋತಿ ಹಾಗೂ ಭಾಗ್ಯಜ್ಯೋತಿ ಯೋಜನೆಗಳಿಂದ ಬಡ ಕುಟುಂಬಗಳು, ಸಣ್ಣ ಕೈಗಾರಿಕೆಗಳು ಉಚಿತ ಹಾಗೂ ಸಹಾಯಧನದ ಆಧಾರದಲ್ಲಿ ವಿದ್ಯುತ್ ಪಡೆಯುತ್ತಿವೆ. ವಿದ್ಯುತ್ ರಂಗವನ್ನು ಖಾಸಗೀಕರಣ ಮಾಡಿದರೆ ಇವರೆಲ್ಲರೂ ಈ ಪ್ರಯೋಜನ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆತಂಕ ವ್ಯಕ್ತಪಡಿಸಿದ್ದಾರೆ.