ಬೆಂಗಳೂರು: ತಳ್ಳುಗಾಡಿಯಲ್ಲಿದ್ದ ರೈಸ್ ಬಾತ್ ತಿಂದಿದ್ದ ನಾಲ್ವರು ದುಷ್ಕರ್ಮಿಗಳು, ಹಣ ಕೇಳಿದ್ದಕ್ಕಾಗಿ ತಳ್ಳುಗಾಡಿಯ ಮಾಲೀಕ ಲಕ್ಷ್ಮಿನಾರಾಯಣ ಮೇಲೆಯೇ ಕಾದ ಎಣ್ಣೆ ಎರಚಿ ಪರಾರಿಯಾಗಿದ್ದಾರೆ. ಹೊಸಕೆರೆಹಳ್ಳಿಯ 100 ಅಡಿ ಹೊರರಸ್ತೆಯ ಕೆಇಬಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.ಲಕ್ಷ್ಮಿನಾರಾಯಣ ಅವರ ಮೈ ಮೇಲೆ ಗಾಯಗಳಾಗಿದ್ದು, ಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ನೀಡಿರುವ ಹೇಳಿಕೆ ಆಧರಿಸಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.