‘ಪಠ್ಯದ ಜತೆಗೆ ಕನ್ನಡದ ಸಾಹಿತ್ಯ ಕೃತಿಗಳನ್ನೂ ಮಕ್ಕಳು ಓದುವಂತಾಗಬೇಕು. ಕನ್ನಡದ ಬೆಳವಣಿಗೆಗೆ ಇರುವ 23 ಪ್ರತಿಷ್ಠಾನಗಳು, 4 ಪ್ರಾಧಿಕಾರಗಳು ಹಾಗೂ 13 ಅಕಾಡೆಮಿಗಳು ಸೃಜನಾತ್ಮಕ ಯೋಜನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಪಸರಿಸುವ ಕೆಲಸ ಮಾಡಬೇಕು. ಕೇವಲ ವೇದಿಕೆಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಭಾಷೆ ಮತ್ತು ಸಂಸ್ಕೃತಿ ವೃದ್ಧಿಸದು. ಜನಸಾಮಾನ್ಯರನ್ನು ತಲಪುವಂತಹ ಚಟುವಟಿಕೆ ಹಮ್ಮಿಕೊಳ್ಳಬೇಕು. ಇದಕ್ಕೆ ಇಲಾಖೆ ಸಹಕಾರ ನೀಡಲಿದೆ’ ಎಂದು ರಶ್ಮಿ ಮಹೇಶ್ ಭರವಸೆ ನೀಡಿದರು.