ಇಟ್ಟಮಡುವಿನ ಮಂಜುನಾಥನಗರದ ನಿವಾಸಿ ಕಿಶೋರ್ ಎಂಬುವರ ಮನೆಯಲ್ಲಿ ಬುಧವಾರ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿತ್ತು. ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ತಗುಲಿ ಅದರಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿತ್ತು. ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೂಡಲೇ ಅವರು ಟೆರೇಸ್ಗೆ ಹೋಗಿ ಅಲ್ಲಿದ್ದ ಗೇಟ್ನ ಬೀಗ ಮುರಿದು ಮನೆಯವರನ್ನು ರಕ್ಷಿಸಿದ್ದಾರೆ.