‘ನೆಲಮಂಗಲ ಬಳಿ ‘ಮಾಗಡಿ ಕೆಂಪೇಗೌಡ’ ಪ್ರಾಥಮಿಕ ಶಾಲೆ ಜಾಗವನ್ನು ಮಂಜುನಾಥ್ ಅವರಿಗೆ ಆರೋಪಿಗಳು ಮೂರು ತಿಂಗಳ ಹಿಂದಷ್ಟೇ ಕೊಡಿಸಿದ್ದರು. ಆದರೆ, ಜಾಗದ ಬಗ್ಗೆ ವ್ಯಾಜ್ಯವಿತ್ತು. ಇದರಿಂದಾಗಿ ಮಂಜುನಾಥ್, ₹ 25 ಲಕ್ಷ ಕಳೆದುಕೊಂಡಿದ್ದರು. ಜಾಗದಿಂದ ಕಳೆದುಕೊಂಡ ಹಣ ಹಾಗೂ ವಿದ್ಯಾರ್ಥಿಗಳ ಶುಲ್ಕದ ಹಣವನ್ನು ವಾಪಸು ನೀಡುವಂತೆ ಮಂಜುನಾಥ್ ಆರೋಪಿಗಳನ್ನು ಒತ್ತಾಯಿಸಿದ್ದರು. ಹಣ ನೀಡುವುದಿಲ್ಲವೆಂದು ಆರೋಪಿಗಳು, ಜೀವ ಬೆದರಿಕೆಯೊಡ್ಡಿದ್ದರು. ಕಿರುಕುಳ ಸಹ ನೀಡಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.