ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

24ಕ್ಕೆ ಗಿರೀಶ್‌ ಕಾಸರವಳ್ಳಿ–ಗೋಪಾಲಕೃಷ್ಣ ಪೈ ಅವರ ‘ಬಿಂಬ ಬಿಂಬನ’ ಕೃತಿ ಬಿಡುಗಡೆ

Published 18 ಮಾರ್ಚ್ 2024, 15:50 IST
Last Updated 18 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ ಮತ್ತು ಚಿತ್ರಕಥಾ ಬರಹಗಾರರಾದ ಗೋಪಾಲಕೃಷ್ಣ ಪೈ ಅವರ ‘ಬಿಂಬ ಬಿಂಬನ’ ಕೃತಿ ಮಾರ್ಚ್‌ 24ರಂದು ಬೆಳಿಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.

‘ವೀರಲೋಕ ಬುಕ್ಸ್‌’ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಟಿ–ನಿರ್ಮಾಪಕಿ ಜಯಮಾಲಾ ಕೃತಿ ಬಿಡುಗಡೆ ಮಾಡುವರು. ನಿರ್ದೇಶಕ ಪಿ. ಶೇಷಾದ್ರಿ ಉದ್ಘಾಟಿಸುವರು. ಕೃತಿ ಕುರಿತು ಸಿನಿಮಾ ಪತ್ರಕರ್ತ ಕೆ. ಪುಟ್ಟಸ್ವಾಮಿ, ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮಾತನಾಡುವರು. ನಿರ್ದೇಶಕ ಬಿ.ಎಸ್. ಲಿಂಗದೇವರು ಅತಿಥಿಯಾಗಿರುವರು. ‘ವೀರಲೋಕ ಬುಕ್ಸ್‌’ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಆಶಯ ನುಡಿಗಳನ್ನಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT