‘ವೀರಲೋಕ ಬುಕ್ಸ್’ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಟಿ–ನಿರ್ಮಾಪಕಿ ಜಯಮಾಲಾ ಕೃತಿ ಬಿಡುಗಡೆ ಮಾಡುವರು. ನಿರ್ದೇಶಕ ಪಿ. ಶೇಷಾದ್ರಿ ಉದ್ಘಾಟಿಸುವರು. ಕೃತಿ ಕುರಿತು ಸಿನಿಮಾ ಪತ್ರಕರ್ತ ಕೆ. ಪುಟ್ಟಸ್ವಾಮಿ, ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮಾತನಾಡುವರು. ನಿರ್ದೇಶಕ ಬಿ.ಎಸ್. ಲಿಂಗದೇವರು ಅತಿಥಿಯಾಗಿರುವರು. ‘ವೀರಲೋಕ ಬುಕ್ಸ್’ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಆಶಯ ನುಡಿಗಳನ್ನಾಡುವರು.