‘1994ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಶಾಲೆಯ ಕೆಳ ಮಹಡಿ ಕಾಂಕ್ರೀಟ್ ಚಾವಣಿ ಹೊಂದಿದೆ. ಮೊದಲ ಅಂತಸ್ತಿನ ಮಹಡಿಯ ಎರಡು ಕೊಠಡಿಗಳು ಸಿಮೆಂಟ್ ತಗಡಿನ ಶೀಟ್ಗಳ ಹೊದಿಕೆ ಹೊಂದಿವೆ. ಅದರಲ್ಲಿ ಬಿರುಕು ಉಂಟಾಗಿದ್ದು, ಮಳೆ ಬಂದರೆ ಕೊಠಡಿಗಳು ಕೆರೆಯಂತಾಗುತ್ತಿವೆ. ಈ ವರ್ಷ ನಿರಂತರ ಸುರಿದ ಮಳೆಗೆ ಕೊಠಡಿಗಳೆಲ್ಲ ಕಮಟು ವಾಸನೆ ಬೀರುತ್ತಿದ್ದವು. ಇದರಿಂದ ಆತಂಕಗೊಂಡ ಕೆಲ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿಲ್ಲ. ಈಗ ದೇವಸ್ಥಾನದಲ್ಲಿ ಶಾಲೆ ಪ್ರಾರಂಭಿಸಿದ ನಂತರ ಮತ್ತೆ ಮಕ್ಕಳು ಶಾಲೆಗೆ ಬರುತ್ತಿದ್ದಾರೆ’ ಎಂದು ಜಯಪ್ರಕಾಶ ನಾರಾಯಣ ವಿಚಾರ ವೇದಿಕೆ ಅಧ್ಯಕ್ಷ ಶಿವಕುಮಾರ್ ಬಿ.ಎಂ. ವಿವರ ನೀಡಿದರು.