ವಿಜಯನಗರದಲ್ಲಿರುವ ಬಿ.ಆರ್. ನಾಗರಾಜ್ ಅವರ ಮನೆ, ಯಲಹಂಕ ಉಪನಗರದ ಸೋಮೇಶ್ವರನಗರದಲ್ಲಿರುವ ಮಂಜುನಾಥ್ ಮನೆ ಹಾಗೂ ಯಲಹಂಕ ತಾಲ್ಲೂಕು ಕಚೇರಿಯ ವಿಶೇಷ ತಹಶೀಲ್ದಾರ್ ಕಚೇರಿಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿಗಾಗಿ ಶೋಧ ನಡೆಸಿದರು. ಎಸಿಬಿ ಬೆಂಗಳೂರು ನಗರ ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.