‘ಈ ಪ್ರದೇಶದಲ್ಲಿ ನೀಲಗಿರಿ ಗಿಡಗಳು ಇರುವ ಬಗ್ಗೆಯೂವಿವರ ನೀಡಲಿ. ಬೆಂಗಳೂರು ಸುತ್ತಮುತ್ತ ಅರಣ್ಯ ಪ್ರದೇಶ ಈಗಾಗಲೇ ಕಡಿಮೆಯಾಗಿದೆ. ಈಗ ಮತ್ತೆ ಜೀವವೈವಿಧ್ಯ ನಾಶಪಡಿಸುವ ಪ್ರಯತ್ನ ಗಳನ್ನು ಸರ್ಕಾರ ಮಾಡಬಾರದು. ಉದ್ಯಾನ ನಿರ್ಮಾಣದಿಂದ ಈ ಪ್ರದೇಶದ ಜೀವ ವೈವಿಧ್ಯಕ್ಕೆ ಮತ್ತು ಅರಣ್ಯಕ್ಕೆ ಯಾವ ರೀತಿಯಲ್ಲೂ ಧಕ್ಕೆ
ಯಾಗುವುದಿಲ್ಲ ಎನ್ನುವ ಮಾಹಿತಿ ಯನ್ನು ಬಹಿರಂಗಪಡಿಸಲಿ. ಆದರೆ, ಇಲಾಖೆ ಯಾವುದೇ ರೀತಿ ಯೋಜನೆ ರೂಪಿಸಿಲ್ಲ ಎಂದು ಉತ್ತರ ನೀಡಲಾಗಿದೆ. ಯೋಜನೆ ರೂಪಿಸ ದೆಯೇ ಉದ್ಯಾನ ನಿರ್ಮಿಸಲು ಮುಂದಾಗಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.