ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬೆಂಗಳೂರಿನ ಸಂಸ್ಥೆ ತ್ರೀ ಡಿ ಕ್ಯಾಮೆರಾ ಮೂಲಕ ಸೆರೆ ಹಿಡಿದಿರುವ ಬಾಹುಬಲಿ ಮಂದಸ್ಮಿತತೆ, ಮಸ್ತಕಾಭಿಷೇಕ ದೃಶ್ಯಾವಳಿ, ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟದ ಸೌಂದರ್ಯ, ಚಿಕ್ಕಬೆಟ್ಟದ 14 ಬಸದಿಗಳು, ತ್ಯಾಗಸ್ತಂಭ, ಮಾನಸ್ತಂಭ, ಬ್ರಹ್ಮಸ್ತಂಭ, ಜೈನ ಮಠದ ಭಿತ್ತಿ ಚಿತ್ರಗಳು, ಕ್ಷೇತ್ರದ ಅಧಿದೇವತೆ ಕುಷ್ಮಾಂಡಿಣಿ ದೇವಿ, ಗಜಲಕ್ಷ್ಮಿ ವಿಶೇಷ, ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ, ಗುಳ್ಳಕಾಯಜ್ಜಿ, ಲಲಿತಾ ಸರೋವರದ ಹಲವು ವಿಸ್ಮಯಗಳನ್ನು ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ಈಗಾಗಲೇ ಬೆಳಗೊಳದ ಸುತ್ತಮುತ್ತಲಿನ ನೂರು ಐತಿಹಾಸಿಕ ಸ್ಥಳಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.