ಬಿಬಿಎಂ ಪದವಿ ಪಡೆದಿದ್ದ ಶ್ರುತಿ ಶೆಟ್ಟಿ ಅವರು, ಟಿಸಿಎಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 2017ರಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಕೆಲಸ ಬಿಟ್ಟಿದ್ದರು. ಎಂಬಿಎ ವ್ಯಾಸಂಗ ಮುಗಿದ ಮೇಲೆ ಬೆಳಗಾವಿ ಹಾಗೂ ಬೆಂಗಳೂರಿನ ವಿವಿಧೆಡೆ ಕೆಲಸಕ್ಕೆ ಸೇರಲು ಹುಡುಕಾಟ ನಡೆಸಿದ್ದರು. ಯಾವ ಕಂಪನಿಯಲ್ಲೂ ಕೆಲಸ ಸಿಕ್ಕಿರಲಿಲ್ಲ. ನಂತರ, ಈ ಹಿಂದೆ ಕೆಲಸ ಮಾಡುತ್ತಿದ್ದ ಟಿಸಿಎಸ್ ಸಂಸ್ಥೆಗೇ ಅರ್ಜಿ ಹಾಕಿದ್ದರು. ಆದರೆ, ಕಂಪನಿ ಎರಡನೇ ಬಾರಿ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿತ್ತು. ಅದರಿಂದ ಸಿಟ್ಟಿಗೆದ್ದ ಅವರು ಮಂಗಳವಾರ ಬೆಳಿಗ್ಗೆ ಕಂಪನಿಗೆ ಕರೆ ಮಾಡಿ, ಸಂಸ್ಥೆಯ ‘ಬಿ’ ಬ್ಲಾಕ್ನಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.