‘ನಾರಾಯಣಸ್ವಾಮಿ ಮನೆಯವರೆಲ್ಲ ಇತ್ತೀಚೆಗೆ ಹೊರಗಡೆ ಹೋಗಿದ್ದರು. ಇದೇ ಸಂದರ್ಭದಲ್ಲಿಯೇ ಆರೋಪಿ, ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ. ₹ 99.75 ಲಕ್ಷ ಮೌಲ್ಯದ 1 ಕೆ.ಜಿ 425 ಗ್ರಾಂ ಚಿನ್ನಾಭರಣ, ₹ 18.92 ಲಕ್ಷ ಮೌಲ್ಯದ 22 ಕೆ.ಜಿ ಬೆಳ್ಳಿ ಸಾಮಗ್ರಿ, ₹ 6.50 ಲಕ್ಷ ಮೌಲ್ಯದ ಮೂರು ಕೈ ಗಡಿಯಾರಗಳು ಹಾಗೂ ₹ 1.29 ಲಕ್ಷ ನಗದು ಕಳ್ಳತನ ಆಗಿರುವುದಾಗಿ ದೂರುದಾರರು ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.