<p><strong>ಬೆಂಗಳೂರು</strong>: ಮಾನವ ಸಹಿತ ಗಗನಯಾನ ಯೋಜನೆಗಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸೂಕ್ಷ್ಮಜೀವಿಗಳ ಮೇಲ್ವಿಚಾರಣಾ ಯೋಜನೆಗೆ ನಗರದ ‘ಪ್ರಯೋಗ’ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ರೆಸ್ಪಾಂಡ್ ಅನುದಾನ ಲಭಿಸಿದೆ.</p>.<p>ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅನುದಾನ ನೀಡಲಾಗಿದೆ. ಈ ಯೋಜನೆ ದೇಶದ ಮುಂಬರುವ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೆ ಪೂರಕವಾಗಿ ನಡೆಯಲಿದೆ. ಗಗನಯಾತ್ರಿಗಳ ಆರೋಗ್ಯ ಮತ್ತು ಬಾಹ್ಯಾಕಾಶ ನೌಕೆಯ ನೈರ್ಮಲ್ಯಕ್ಕೆ ನಿರ್ಣಾಯಕವಾದ ಸೂಕ್ಷ್ಮಜೀವಿ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ತಿಳಿಸಿದೆ. </p>.<p>ಈ ಯೋಜನೆಯ ನೇತೃತ್ವವನ್ನು ಪ್ರಯೋಗದ ಸಂಶೋಧಕಿ ರಮ್ಯಾ ಪ್ರಭು ವಹಿಸಿದ್ದು, ವೆಂಕಟ ಕೃಷ್ಣ, ಓಂ ಪ್ರಕಾಶ್ ಮತ್ತು ಸಾಯಿ ಹರ್ಷಿಣಿ ತಂಡದಲ್ಲಿರುತ್ತಾರೆ ಎಂದು ಹೇಳಿದೆ.</p>.<p>ರಮ್ಯಾ ಪ್ರಭು ಮಾತನಾಡಿ, ‘ಇಸ್ರೊದಿಂದ ಈ ಯೋಜನೆಯನ್ನು ಪಡೆಯಲು ಸಂತೋಷವಾಗಿದೆ. ಬಾಹ್ಯಾಕಾಶ ನೌಕೆಯ ಪರಿಸರದಲ್ಲಿ ಸೂಕ್ಷ್ಮಜೀವಿಯ ಇರುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ಗಗನಯಾತ್ರಿಗಳ ಸುರಕ್ಷತೆಗಾಗಿ ಈ ಯೋಜನೆ ಅಗತ್ಯ’ ಎಂದರು.</p>.<p>‘ಅತ್ಯಾಧುನಿಕ ಪ್ರಯೋಗಾಲಯ ಹೊಂದಿರುವ 'ಪ್ರಯೋಗ' ಸಂಸ್ಥೆಗೆ, ಇಸ್ರೊದಿಂದ ಯೋಜನೆ ಪಡೆಯುವುದು ಒಂದು ಮಹತ್ವದ ಮೈಲಿಗಲ್ಲು’ ಎಂದು ಪ್ರಯೋಗದ ಸಂಶೋಧನಾ ನಿರ್ದೇಶಕ ಕೆ. ಎಸ್. ನಾಗಭೂಷಣ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಾನವ ಸಹಿತ ಗಗನಯಾನ ಯೋಜನೆಗಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸೂಕ್ಷ್ಮಜೀವಿಗಳ ಮೇಲ್ವಿಚಾರಣಾ ಯೋಜನೆಗೆ ನಗರದ ‘ಪ್ರಯೋಗ’ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ರೆಸ್ಪಾಂಡ್ ಅನುದಾನ ಲಭಿಸಿದೆ.</p>.<p>ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅನುದಾನ ನೀಡಲಾಗಿದೆ. ಈ ಯೋಜನೆ ದೇಶದ ಮುಂಬರುವ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೆ ಪೂರಕವಾಗಿ ನಡೆಯಲಿದೆ. ಗಗನಯಾತ್ರಿಗಳ ಆರೋಗ್ಯ ಮತ್ತು ಬಾಹ್ಯಾಕಾಶ ನೌಕೆಯ ನೈರ್ಮಲ್ಯಕ್ಕೆ ನಿರ್ಣಾಯಕವಾದ ಸೂಕ್ಷ್ಮಜೀವಿ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ತಿಳಿಸಿದೆ. </p>.<p>ಈ ಯೋಜನೆಯ ನೇತೃತ್ವವನ್ನು ಪ್ರಯೋಗದ ಸಂಶೋಧಕಿ ರಮ್ಯಾ ಪ್ರಭು ವಹಿಸಿದ್ದು, ವೆಂಕಟ ಕೃಷ್ಣ, ಓಂ ಪ್ರಕಾಶ್ ಮತ್ತು ಸಾಯಿ ಹರ್ಷಿಣಿ ತಂಡದಲ್ಲಿರುತ್ತಾರೆ ಎಂದು ಹೇಳಿದೆ.</p>.<p>ರಮ್ಯಾ ಪ್ರಭು ಮಾತನಾಡಿ, ‘ಇಸ್ರೊದಿಂದ ಈ ಯೋಜನೆಯನ್ನು ಪಡೆಯಲು ಸಂತೋಷವಾಗಿದೆ. ಬಾಹ್ಯಾಕಾಶ ನೌಕೆಯ ಪರಿಸರದಲ್ಲಿ ಸೂಕ್ಷ್ಮಜೀವಿಯ ಇರುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ಗಗನಯಾತ್ರಿಗಳ ಸುರಕ್ಷತೆಗಾಗಿ ಈ ಯೋಜನೆ ಅಗತ್ಯ’ ಎಂದರು.</p>.<p>‘ಅತ್ಯಾಧುನಿಕ ಪ್ರಯೋಗಾಲಯ ಹೊಂದಿರುವ 'ಪ್ರಯೋಗ' ಸಂಸ್ಥೆಗೆ, ಇಸ್ರೊದಿಂದ ಯೋಜನೆ ಪಡೆಯುವುದು ಒಂದು ಮಹತ್ವದ ಮೈಲಿಗಲ್ಲು’ ಎಂದು ಪ್ರಯೋಗದ ಸಂಶೋಧನಾ ನಿರ್ದೇಶಕ ಕೆ. ಎಸ್. ನಾಗಭೂಷಣ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>