<p><strong>ಬೆಂಗಳೂರು:</strong> ‘ಗಳಿಸಿದ ಹಣ ಎಂದಿಗೂ ನಮ್ಮದಲ್ಲ. ನಾವು ಪಡೆದದ್ದನ್ನು ಸಮಾಜಕ್ಕೆ ಹಿಂತಿರುಗಿಸಿ, ಅದರ ಋಣ ತೀರಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿಭಾನುವಾರ ‘ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೆ.ಪಿ.ನಾರಾಯಣಸ್ವಾಮಿ ಅವರು ತಮ್ಮ ಬದುಕಿನುದ್ದಕ್ಕೂ ದುರ್ಬಲ ಜನರ ಸೇವೆಗಾಗಿಯೇ ಶ್ರಮಿಸಿದ್ದರು. ಅವರ ದಾರಿಯಲ್ಲೇ ಮಗನೂ (ಜೆ.ಪಿ.ಸುಧಾಕರ) ಸಾಗುತ್ತಿದ್ದಾನೆ. ಆರ್ಥಿಕವಾಗಿ ಹಿಂದುಳಿದ, ವಿಶೇಷ ಚೇತನ ಮಕ್ಕಳಿಗಾಗಿಯೇ ಪ್ರತಿಷ್ಠಾನಆರಂಭಿಸಲಾಗಿದೆ’ ಎಂದರು.</p>.<p>ನಟ ಪುನೀತ್ ರಾಜಕುಮಾರ್, ‘ಯಾರೇ ಆಗಲಿ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿ, ನೂರಾರು ಜನರ ಬಾಳಿಗೆ ಬೆಳಕಾಗಿ’ ಎಂದರು.</p>.<p>ಪ್ರತಿಷ್ಠಾನದ ಗ್ರಂಥಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ವಿಶೇಷ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯ ನೀಡುವುದಾಗಿ ಪ್ರತಿಷ್ಠಾನ ಪ್ರಕಟಿಸಿತು. ಆರು ಮಕ್ಕಳಿಗೆ ತಲಾ ₹5 ಸಾವಿರ ವಿತರಿಸಲಾಯಿತು. </p>.<p>‘ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳ ಕಂಡುಬಂದಲ್ಲಿ ತಿಳಿಸಿ. ಅವರಿಗೂ ನೆರವು ಸಿಗುವಂತಾಗಲಿ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ತಿಳಿಸಿದರು.</p>.<p>₹ 7.5 ಲಕ್ಷ ನೆರವು: ನಗರದ ಮಾತೃಶ್ರೀ ಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ಸಮವಸ್ತ್ರ ಮತ್ತು ಊಟದ ಖರ್ಚಿಗೆ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ ಅವರು ₹ 7.5 ಲಕ್ಷ ನೆರವು ನೀಡಿದರು. ಬಳಿಕ ಆರ್.ಎಲ್.ಜಾಲಪ್ಪ ಟ್ರಸ್ಟ್ ₹ 1 ಲಕ್ಷ ನೆರವು ಪ್ರಕಟಿಸಿತು.</p>.<p>358 ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಾರ್ಷಿಕ ₹ 20.65 ಲಕ್ಷ ವಿದ್ಯಾರ್ಥಿವೇತನ ವಿತರಿಸುವುದಾಗಿಯೂ ಪ್ರತಿಷ್ಠಾನವು ಘೋಷಿಸಿತು. (ಪದವಿ ₹ 5 ಸಾವಿರ, ಸ್ನಾತಕೋತ್ತರ ₹ 10, ಮೆಡಿಕಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹ 15 ಸಾವಿರ ವಿದ್ಯಾರ್ಥಿವೇತನ). ಮೈಕ್ರೊಬಯಾಲಜಿಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.</p>.<p>ಸಾಧಕರಿಗೆ ಸನ್ಮಾನ: ಲಕ್ಷ್ಮೀನರಸಯ್ಯ (ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ), ಎ.ಆರ್.ರಾಮಯ್ಯ (ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ), ಅಂಜಯ್ಯ (ಸಮಾಜದ ಹಿರಿಯರು), ಜಗದೀಶ (ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ಪರಶುರಾಮ್ (ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ).</p>.<p><strong>104ರಲ್ಲೂ ಸ್ವಂತ ದುಡಿಮೆ ನಂಬಿರುವ ಲಿಂಗಮ್ಮ</strong></p>.<p>ಮಂಡ್ಯದ ಲಿಂಗಮ್ಮ (104) ಎಂಬುವವರಿಗೆ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಮಾಸಾಶನ ನೀಡುವುದಾಗಿ ಪ್ರತಿಷ್ಠಾನವು ಪ್ರಕಟಿಸಿತು.</p>.<p>ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಲಿಂಗಮ್ಮ, ಈ ವಯಸ್ಸಿನಲ್ಲೂ ಜೀವನದ ಬಂಡಿ ಮುನ್ನೆಡೆಸಲು ಸ್ವಂತ ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಅವರು ಮಂಡ್ಯದ ಮಹಾವೀರ ಚಿತ್ರಮಂದಿರದ ಬಳಿ ನಿತ್ಯ ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಗಳಿಸಿದ ಹಣ ಎಂದಿಗೂ ನಮ್ಮದಲ್ಲ. ನಾವು ಪಡೆದದ್ದನ್ನು ಸಮಾಜಕ್ಕೆ ಹಿಂತಿರುಗಿಸಿ, ಅದರ ಋಣ ತೀರಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿಭಾನುವಾರ ‘ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೆ.ಪಿ.ನಾರಾಯಣಸ್ವಾಮಿ ಅವರು ತಮ್ಮ ಬದುಕಿನುದ್ದಕ್ಕೂ ದುರ್ಬಲ ಜನರ ಸೇವೆಗಾಗಿಯೇ ಶ್ರಮಿಸಿದ್ದರು. ಅವರ ದಾರಿಯಲ್ಲೇ ಮಗನೂ (ಜೆ.ಪಿ.ಸುಧಾಕರ) ಸಾಗುತ್ತಿದ್ದಾನೆ. ಆರ್ಥಿಕವಾಗಿ ಹಿಂದುಳಿದ, ವಿಶೇಷ ಚೇತನ ಮಕ್ಕಳಿಗಾಗಿಯೇ ಪ್ರತಿಷ್ಠಾನಆರಂಭಿಸಲಾಗಿದೆ’ ಎಂದರು.</p>.<p>ನಟ ಪುನೀತ್ ರಾಜಕುಮಾರ್, ‘ಯಾರೇ ಆಗಲಿ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿ, ನೂರಾರು ಜನರ ಬಾಳಿಗೆ ಬೆಳಕಾಗಿ’ ಎಂದರು.</p>.<p>ಪ್ರತಿಷ್ಠಾನದ ಗ್ರಂಥಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ವಿಶೇಷ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯ ನೀಡುವುದಾಗಿ ಪ್ರತಿಷ್ಠಾನ ಪ್ರಕಟಿಸಿತು. ಆರು ಮಕ್ಕಳಿಗೆ ತಲಾ ₹5 ಸಾವಿರ ವಿತರಿಸಲಾಯಿತು. </p>.<p>‘ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳ ಕಂಡುಬಂದಲ್ಲಿ ತಿಳಿಸಿ. ಅವರಿಗೂ ನೆರವು ಸಿಗುವಂತಾಗಲಿ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ತಿಳಿಸಿದರು.</p>.<p>₹ 7.5 ಲಕ್ಷ ನೆರವು: ನಗರದ ಮಾತೃಶ್ರೀ ಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ಸಮವಸ್ತ್ರ ಮತ್ತು ಊಟದ ಖರ್ಚಿಗೆ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ ಅವರು ₹ 7.5 ಲಕ್ಷ ನೆರವು ನೀಡಿದರು. ಬಳಿಕ ಆರ್.ಎಲ್.ಜಾಲಪ್ಪ ಟ್ರಸ್ಟ್ ₹ 1 ಲಕ್ಷ ನೆರವು ಪ್ರಕಟಿಸಿತು.</p>.<p>358 ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಾರ್ಷಿಕ ₹ 20.65 ಲಕ್ಷ ವಿದ್ಯಾರ್ಥಿವೇತನ ವಿತರಿಸುವುದಾಗಿಯೂ ಪ್ರತಿಷ್ಠಾನವು ಘೋಷಿಸಿತು. (ಪದವಿ ₹ 5 ಸಾವಿರ, ಸ್ನಾತಕೋತ್ತರ ₹ 10, ಮೆಡಿಕಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹ 15 ಸಾವಿರ ವಿದ್ಯಾರ್ಥಿವೇತನ). ಮೈಕ್ರೊಬಯಾಲಜಿಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.</p>.<p>ಸಾಧಕರಿಗೆ ಸನ್ಮಾನ: ಲಕ್ಷ್ಮೀನರಸಯ್ಯ (ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ), ಎ.ಆರ್.ರಾಮಯ್ಯ (ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ), ಅಂಜಯ್ಯ (ಸಮಾಜದ ಹಿರಿಯರು), ಜಗದೀಶ (ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ಪರಶುರಾಮ್ (ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ).</p>.<p><strong>104ರಲ್ಲೂ ಸ್ವಂತ ದುಡಿಮೆ ನಂಬಿರುವ ಲಿಂಗಮ್ಮ</strong></p>.<p>ಮಂಡ್ಯದ ಲಿಂಗಮ್ಮ (104) ಎಂಬುವವರಿಗೆ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಮಾಸಾಶನ ನೀಡುವುದಾಗಿ ಪ್ರತಿಷ್ಠಾನವು ಪ್ರಕಟಿಸಿತು.</p>.<p>ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಲಿಂಗಮ್ಮ, ಈ ವಯಸ್ಸಿನಲ್ಲೂ ಜೀವನದ ಬಂಡಿ ಮುನ್ನೆಡೆಸಲು ಸ್ವಂತ ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಅವರು ಮಂಡ್ಯದ ಮಹಾವೀರ ಚಿತ್ರಮಂದಿರದ ಬಳಿ ನಿತ್ಯ ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>