ಆಡಳಿತಾತ್ಮಕ ತೀರ್ಮಾನ ಹಣಕಾಸಿನ ನಿರ್ವಹಣೆಯನ್ನು ಐಎಎಸ್ ಅಧಿಕಾರಿಗಳು ಮಾಡಬಹುದು. ಆದರೆ ಅವರಿಗೆ ತಾಂತ್ರಿಕತೆ ಬಗ್ಗೆ ಅಷ್ಟು ಗೊತ್ತಿರುವುದಿಲ್ಲ. ಈಗ ತಾಂತ್ರಿಕ ತಿಳಿವಳಿಕೆ ಇರುವವರನ್ನೇ ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡುತ್ತಿರುವುದು ಉತ್ತಮ ನಿರ್ಧಾರ.
ಕೆ.ಎನ್. ಕೃಷ್ಣಪ್ರಸಾದ್ ರೈಲ್ವೆ ಹೋರಾಟಗಾರ
ತಾಂತ್ರಿಕ ತಜ್ಞರಲ್ಲದವರು ವ್ಯವಸ್ಥಾಪಕ ನಿರ್ದೇಶಕರಾಗಿರುವುದರಿಂದ ಮತ್ತು ಅವರಿಗೆ ಬೇರೆ ಬೇರೆ ಜವಾಬ್ದಾರಿಗಳ ನಡುವೆ ಇದು ಒಂದು ಎಂದು ಇರುವುದರಿಂದ ಉಪನಗರ ರೈಲು ಯೋಜನೆ ಸಾಗುತ್ತಿಲ್ಲ ಎಂದು ಇಲ್ಲಿವರೆಗೆ ಹಲವರು ಸಬೂಬು ಹೇಳುತ್ತಿದ್ದರು. ರೈಲ್ವೆಯಲ್ಲಿ ಕೆಲಸ ಮಾಡಿ ಗೊತ್ತಿರುವ ಎಂಜಿನಿಯರ್ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿ ಬರುತ್ತಿರುವುದರಿಂದ ಇನ್ನು ಮುಂದಾದರೂ ಕಾಮಗಾರಿಗೆ ವೇಗ ನೀಡಬೇಕು.
ರಾಜಕುಮಾರ್ ದುಗರ್ ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥಾಪಕ