ಕಣ್ವ ಮಠದಲ್ಲಿ ಪಂಚಮ ಚಾತುರ್ಮಾಸ್ಯ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಗಣ್ಯರಿಗೆ ‘ಕಣ್ವ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ಅವರು, ’ನಮ್ಮ ಪರಂಪರೆ, ಧರ್ಮ ಮತ್ತು ಗ್ರಂಥಗಳನ್ನು ಅನುಸರಿಸುವುದರ ಜೊತೆಗೆ ವಿವಿಧ ಸಂಪ್ರದಾಯಗಳನ್ನು ಆಚರಿಸುವವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.