ಬೆಂಗಳೂರು: ಪ್ರಾಜೆಕ್ಟ್ ಸಲ್ಲಿಕೆ ವಿಳಂಬವಾದ ಕಾರಣಕ್ಕೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ಕಾನೂನು ಕಾಲೇಜಿನ ನಿರ್ಧಾರ ಪ್ರಶ್ನಿಸಿ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
‘ಈ ಸಂದರ್ಭದಲ್ಲಿ ವಿದ್ಯಾರ್ಥಿಗೆ ನ್ಯಾಯಾಲಯ ನೆರವಾದರೆ ವಿದ್ಯಾರ್ಥಿಗಳು ಇದನ್ನು ದುರುಪಯೋಗ ಮಾಡಿಕೊಳ್ಳಲು ಯೋಚಿಸುವ ಸಾಧ್ಯತೆ ಇದೆ’ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
‘ಅನಾರೋಗ್ಯ ಮತ್ತು ಇಂಟರ್ನೆಟ್ ಸೌಲಭ್ಯದ ಕೊರತೆಯಿಂದಾಗಿ ನಿರ್ದಿಷ್ಟ ಸಮಯಕ್ಕೆ ಪ್ರಾಜೆಕ್ಟ್ ಸಲ್ಲಿಸಲು ಆಗಲಿಲ್ಲ’ ಎಂದು ಅರ್ಜಿದಾರರಾದ ದಿವ್ಯಾಂಶು ಬಡೋಲೆ ತಿಳಿಸಿದ್ದಾರೆ.
ಈ ವಾದವನ್ನು ಅಲ್ಲಗಳೆದಿರುವ ರಾಷ್ಟ್ರೀಯ ಕಾನೂನು ವಿದ್ಯಾಲಯ, ‘ಅವರು ಕ್ಯಾರೆಂಟೈನ್ನಲ್ಲಿ ಇದ್ದರು ಎಂಬುದಕ್ಕೆ ಯಾವುದೇ ಪುರಾವೆ ಸಲ್ಲಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ವಿಶೇಷ ಪ್ರಕರಣ ಎನಿಸದ ಹೊರತು ಈ ರೀತಿಯ ರಿಟ್ ಅರ್ಜಿಗಳನ್ನು ಆಧರಿಸಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟರು.