ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಿರತೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ಆಹಾರಕ್ಕಾಗಿ ಸಂಚರಿಸುವುದು ಸಾಮಾನ್ಯ. ಹೀಗಾಗಿ, ಚಿರತೆ ಸೆರೆ ವಿಳಂಬವಾಗಿದೆ. ತುರಹಳ್ಳಿ ವ್ಯಾಪ್ತಿಯಲ್ಲಿ ಆಹಾರ ಕೊರತೆ ಇಲ್ಲ. ನೂರಾರು ಬೀದಿ ನಾಯಿಗಳಿವೆ. ಆಹಾರದ ಅಭಾವ ಕಂಡುಬಂದಾಗ ಮಾತ್ರ ಪ್ರಾಣಿಗಳು ಮನುಷ್ಯನ ಮೇಲೆ ಎರಗುತ್ತವೆ. ಚಿರತೆಗಳು ಮನುಷ್ಯರನ್ನು ಬಾಧಿಸುವ ಸಾಧ್ಯತೆ ಕಡಿಮೆ. ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕಗ್ಗಲೀಪುರ ಅರಣ್ಯ ವಲಯಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.