13,800 ಹೆಕ್ಟೇರ್ ವಿಸ್ತಾರದ ವನ್ಯಜೀವಿ ಧಾಮ ತನ್ನ ಅಂದ ಹೆಚ್ಚಿಸಿಕೊಳ್ಳುತ್ತಿದೆ.ಕುಂಚಾವರಂ, ಶಾದಿಪುರ, ಧರ್ಮಾಸಾಗರ, ಗೊಟ್ಟಮಗೊಟ್ಟ, ಚಂದ್ರಂಪಳ್ಳಿ, ಸೋಮಲಿಂಗದಳ್ಳಿ, ಶಿವರೆಡ್ಡಿಪಳ್ಳಿ ಸುತ್ತಲಿನ ಕಾಡು ಚಿಗುರೊಡೆದಿದ್ದರಿಂದ ವನ್ಯಜೀವಿಗಳಿಗೂ ಆಹಾರ ದೊರೆಯುವಂತಾಗಿದೆ. ಜತೆಗೆ ಬಿಸಿಲಿನಿಂದ ಬಸವಳಿಯುವ ವನ್ಯಜೀವಿಗಳಿಗೂ ನೆರಳು ಲಭಿಸುವಂತಾಗಿದೆ.