‘ಮೆಹಬೂಬ್ (19) ಮೃತ ಯುವಕ. ಯಾದಗಿರಿ ಮೂಲದವನಾಗಿರುವ ಆತ, ಚುಂಚಘಟ್ಟದ ಶ್ರೀನಿಧಿ ಲೇಔಟ್ನಲ್ಲಿ ಕುಟುಂಬದೊಂದಿಗೆ ಸುಮಾರು 10 ವರ್ಷದಿಂದ ವಾಸವಿದ್ದ. ಹರಿನಗರದ ಕಿರಣ್ ಹಾಗೂ ಆತನ ಸ್ನೇಹಿತರು ಮೆಹಬೂಬ್ನನ್ನು ಹತ್ಯೆ ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.