‘ಸಹೋದರನೂ ಆಗಿರುವ ಆರೋಪಿ ಶ್ರೀಕಂಠ್ ಬಳಿ ಅಳಲು ತೋಡಿಕೊಂಡಿದ್ದ ಚೈತ್ರಾ, ‘ನನ್ನ ಪತಿ ತಲೆ ಕೆಡಿಸಿರುವ ಶೈಲಶ್ರೀ, ಆತನನ್ನು ಮದುವೆ ಮಾಡಿಕೊಂಡಿದ್ದಾಳೆ. ಆಕೆಯಿಂದ ಪತಿ ಮನೆಗೂ ಬರುತ್ತಿಲ್ಲ. ನನ್ನ ಜೊತೆ ಸಂಸಾರ ಮಾಡುತ್ತಿಲ್ಲ. ನನ್ನ ಜೀವನ ಹಾಳಾಯಿತು’ ಎಂದಿದ್ದರು. ಅದರಿಂದ ಸಿಟ್ಟಾಗಿದ್ದ ಶ್ರೀಕಂಠ್, ಶೈಲಶ್ರೀ ಅವರನ್ನು ಕೊಂದರೆ ಅಕ್ಕ ಚೈತ್ರಾ ಭವಿಷ್ಯ ಚೆನ್ನಾಗಿರುತ್ತೆ ಎಂದು ತಿಳಿದು ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.