‘ಶುಕ್ರವಾರ ಬೆಳಿಗ್ಗೆ ಸ್ನೇಹಿತರೆಲ್ಲರೂ ಕೆಲಸಕ್ಕೆ ಹೋಗಿದ್ದರು. ಸಮೀರ್ ಹಾಗೂ ಸ್ನೇಹಿತ ಸುಬೋಧ್ ಮಾತ್ರ ಶೆಡ್ನಲ್ಲಿ ಇದ್ದರು. ಅದೇ ಸಂದರ್ಭದಲ್ಲೇ ನೀರಿನ ಟ್ಯಾಂಕರ್ ಶೆಡ್ ಬಳಿ ಬಂದಿತ್ತು. ನಿರ್ಲಕ್ಷ್ಯದಿಂದ ಟ್ಯಾಂಕರ್ ಚಲಾಯಿಸಿದ್ದ ಚಾಲಕ, ಶೆಡ್ನೊಳಗೆ ನುಗ್ಗಿಸಿದ್ದ. ಈ ಸಂಬಂಧ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.