ಇದಕ್ಕೆ ಪ್ರತಿಕ್ರಿಯಿಸಿದ ಮನಮೋಹನ್, ‘ಸ್ವಾಮಿ, ಅರ್ಜಿದಾರರ ಪರ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿ ಸಾಕಷ್ಟು ಸಮಯವಾಗಿದೆ. ಆದರೂ, ರಾಜ್ಯ ಸರ್ಕಾರ ತೀರ್ಪು ಪಾಲಿಸುತ್ತಿಲ್ಲ. ಈ ಮೊದಲು ಕೋರ್ಟ್ ನಿರ್ದೇಶನ ಪಾಲಿಸುತ್ತೇವೆ ಎಂದಿದ್ದ ಸರ್ಕಾರ ಈಗ ಮತ್ತೆ ನಿರ್ದೇಶನ ಹಿಂಪಡೆಯಲು ಕೋರಲಾಗುವುದು ಎಂದು ಹೇಳುತ್ತಿದೆ. ಇದು ಸರಿಯಲ್ಲ. ಪ್ರಕರಣವನ್ನು ವಿಳಂಬಗೊಳಿಸಲಾಗುತ್ತಿದೆ’ ಎಂದರು.