ಸೋಮವಾರ ಬೆಳಿಗ್ಗೆ ಶ್ರೀರಾಮದೇವರಿಗೆ ವೇದಪಾರಾಯಣ, ಪುಣ್ಯಾಹ, ಫಲಾಪಂಚಾಮೃತ ಅಭಿಷೇಕ ನಂತರ ಅಗ್ನಿಪ್ರತಿಷ್ಠೆ, ಶ್ರೀರಾಮ ತಾರಕ ಹೋಮ, ಮೂರ್ತಿ ಹೋಮ, ಮಹಾ ಪೂರ್ಣಾಹುತಿ ದಿಕ್ಪಾಲಕರ ಬಲಿಪ್ರದಾನ, ಕುಂಭಾಬಿಷೇಕ ಮತ್ತು ಪ್ರಾಕಾರೋತ್ಸವ ಶೋಢಷೋಪಚಾರ, ಅಷ್ಟಾವಾದಾನ ಸೇವೆ ಮಹಾ ಮಂಗಳಾರತಿ ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು, ದೇವರ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.