ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ. ಕೆಲದಿನಗಳಿಂದ ನಗರದ ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದರು. ಶನಿವಾರ ಸುರಿದ ಮಳೆ ನಗರಕ್ಕೆ ತಂಪೆರೆಯಿತು. ಅದರಲ್ಲೇ ವಾಹನಗಳು ಸಂಚರಿಸಿದ ದೃಶ್ಯಗಳು ಕಂಡುಬಂದವು. ವಿಜಯನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್ಪೇಟೆ, ವಿಧಾನಸೌಧ ಸುತ್ತಮುತ್ತ, ಮಲ್ಲೇಶ್ವರ, ನಂದಿನಿಲೇಔಟ್, ಯಶವಂತಪುರ, ಸದಾಶಿವನಗರ, ಬಸವನಗುಡಿ, ಗಿರಿನಗರ, ಜೆ.ಪಿ.ನಗರ ಹಾಗೂ ಇತರೆಡೆ ಮಳೆ ಸುರಿಯಿತು.