<p><strong>ಬೆಂಗಳೂರು:</strong> ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಸಂದ್ರದ ಪೈಪ್ಲೈನ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್ಎಸ್ಬಿ) ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಈ ಜಾಗವು ಮೊದಲು ಅಂಗವಿಕಲರಾಗಿರುವಟಿ.ಆರ್. ಜೈಕೃಷ್ಣ ಅವರಿಗೆ ಮೊದಲು ಮಂಜೂರಾಗಿತ್ತು. ನಂತರ, ಈ ಜಾಗದಲ್ಲಿ ಸಂಜೀವಿನಿ ನಗರದ ಶ್ರುತಿಅವರು ಇಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಆದರೆ, ಜಲಮಂಡಳಿ ಸ್ಥಳ ಮಂಜೂರಾತಿಯನ್ನು ರದ್ದುಗೊಳಿಸಿ,ತಕ್ಷಣವೇ ಈ ಜಾಗದಲ್ಲಿ ನಿರ್ಮಿಸಿದ್ದ ನಂದಿನಿ ಮಿಲ್ಕ್ ಪಾರ್ಲರ್ ಅನ್ನು ತೆರವುಗೊಳಿಸುವಂತೆ ಸೂಚಿಸಿತ್ತು ಎಂದು ಸ್ಥಳೀಯರಾದ ಪವನ್ ಹಾಗೂ ಮತ್ತಿತರರು ದೂರಿದ್ದಾರೆ.</p>.<p>ನಂದಿನಿ ಪಾರ್ಲರ್ಗೆ ಸ್ಥಳಾವಕಾಶ ಒದಗಿಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಕೆಎಂಎಫ್ಗೆ ಪತ್ರ ಸಹ ಬರೆದಿತ್ತು. ಈ ಸ್ಥಳದಲ್ಲಿ ನಂದಿನಿ ಪಾರ್ಲರ್ ತೆರೆಯಲು ಅವಕಾಶ ನೀಡಿದರೆ 110 ಹಳ್ಳಿಯ ವ್ಯಾಪ್ತಿಗೆ ಒಳಗೊಂಡಂತೆ ಕಾಮಗಾರಿಗಳು ಹಾಗೂ ನಿರ್ವಹಣೆಗೆ ಕಷ್ಟಕರವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.</p>.<p>ಈ ಬಗ್ಗೆ ಶಾಸಕ ಆರ್. ಮಂಜುನಾಥ್ ಅವರು ಸಹ, ತಮ್ಮ ಕ್ಷೇತ್ರದ ವಾರ್ಡ್ ನಂ.15ರಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಪೈಪ್ಲೈನ್ ಸ್ವತ್ತಿನಲ್ಲಿ ತಾತ್ಕಾಲಿಕ ನಂದಿನಿ ಪಾರ್ಲರ್ ನಿರ್ಮಿಸಲು ನೀಡಿರುವ ಸ್ಥಳ ಮಂಜೂರಾತಿಯನ್ನು ಹಿಂಪಡೆಯುವಂತೆ ಪತ್ರ ಬರೆದಿದ್ದರು.</p>.<p>ಶ್ರುತಿ ಅವರು ತಮ್ಮ ವೈಯಕ್ತಿಕ ಲಾಭಗೋಸ್ಕರ ನಂದಿನಿ ಪಾರ್ಲರ್ ಮಾಲೀಕತ್ವವನ್ನು ಬೇರೆಯವರಿಗೆ ಹಸ್ತಾಂತರಿಸಿರುವುದಾಗಿ ಸ್ಥಳೀಯರು ದೂರು ನೀಡಿರುವುದರಿಂದ ಸ್ಥಳ ಮಂಜೂರಾತಿಯನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಸಂದ್ರದ ಪೈಪ್ಲೈನ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್ಎಸ್ಬಿ) ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಈ ಜಾಗವು ಮೊದಲು ಅಂಗವಿಕಲರಾಗಿರುವಟಿ.ಆರ್. ಜೈಕೃಷ್ಣ ಅವರಿಗೆ ಮೊದಲು ಮಂಜೂರಾಗಿತ್ತು. ನಂತರ, ಈ ಜಾಗದಲ್ಲಿ ಸಂಜೀವಿನಿ ನಗರದ ಶ್ರುತಿಅವರು ಇಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಆದರೆ, ಜಲಮಂಡಳಿ ಸ್ಥಳ ಮಂಜೂರಾತಿಯನ್ನು ರದ್ದುಗೊಳಿಸಿ,ತಕ್ಷಣವೇ ಈ ಜಾಗದಲ್ಲಿ ನಿರ್ಮಿಸಿದ್ದ ನಂದಿನಿ ಮಿಲ್ಕ್ ಪಾರ್ಲರ್ ಅನ್ನು ತೆರವುಗೊಳಿಸುವಂತೆ ಸೂಚಿಸಿತ್ತು ಎಂದು ಸ್ಥಳೀಯರಾದ ಪವನ್ ಹಾಗೂ ಮತ್ತಿತರರು ದೂರಿದ್ದಾರೆ.</p>.<p>ನಂದಿನಿ ಪಾರ್ಲರ್ಗೆ ಸ್ಥಳಾವಕಾಶ ಒದಗಿಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಕೆಎಂಎಫ್ಗೆ ಪತ್ರ ಸಹ ಬರೆದಿತ್ತು. ಈ ಸ್ಥಳದಲ್ಲಿ ನಂದಿನಿ ಪಾರ್ಲರ್ ತೆರೆಯಲು ಅವಕಾಶ ನೀಡಿದರೆ 110 ಹಳ್ಳಿಯ ವ್ಯಾಪ್ತಿಗೆ ಒಳಗೊಂಡಂತೆ ಕಾಮಗಾರಿಗಳು ಹಾಗೂ ನಿರ್ವಹಣೆಗೆ ಕಷ್ಟಕರವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.</p>.<p>ಈ ಬಗ್ಗೆ ಶಾಸಕ ಆರ್. ಮಂಜುನಾಥ್ ಅವರು ಸಹ, ತಮ್ಮ ಕ್ಷೇತ್ರದ ವಾರ್ಡ್ ನಂ.15ರಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಪೈಪ್ಲೈನ್ ಸ್ವತ್ತಿನಲ್ಲಿ ತಾತ್ಕಾಲಿಕ ನಂದಿನಿ ಪಾರ್ಲರ್ ನಿರ್ಮಿಸಲು ನೀಡಿರುವ ಸ್ಥಳ ಮಂಜೂರಾತಿಯನ್ನು ಹಿಂಪಡೆಯುವಂತೆ ಪತ್ರ ಬರೆದಿದ್ದರು.</p>.<p>ಶ್ರುತಿ ಅವರು ತಮ್ಮ ವೈಯಕ್ತಿಕ ಲಾಭಗೋಸ್ಕರ ನಂದಿನಿ ಪಾರ್ಲರ್ ಮಾಲೀಕತ್ವವನ್ನು ಬೇರೆಯವರಿಗೆ ಹಸ್ತಾಂತರಿಸಿರುವುದಾಗಿ ಸ್ಥಳೀಯರು ದೂರು ನೀಡಿರುವುದರಿಂದ ಸ್ಥಳ ಮಂಜೂರಾತಿಯನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>