ಗುತ್ತಿಗೆದಾರರು ನಿಗದಿತ ಯೋಜನೆಯಂತೆ ಕಾಮಗಾರಿಯ ವೇಗ ಕಾಯ್ದುಕೊಂಡಿರುವುದನ್ನು ಅಧಿಕಾರಿಗಳು ಪರಿಶೀಲಿಸಿ, ಖಾತರಿಪಡಿಸಿಕೊಳ್ಳಬೇಕು. ಕಾಮಗಾರಿಯ ವೇಗ ತಗ್ಗಿದರೆ ಎಚ್ಚರಿಕೆ ನೀಡಿ, ಗಡುವಿನೊಳಗೆ ಪೂರ್ಣಗೊಳಿಸುವಂತೆ ನಿಗಾ ವಹಿಸಬೇಕು. ಅ.31ಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಲೇಬೇಕು. ಆ ನಂತರ ಯಾವುದೇ ಕಾರಣ ನೀಡಲು ಅವಕಾಶ ನೀಡುವುದಿಲ್ಲ ಎಂದರು.