‘ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೆಮ್ಮಿಗೆಪುರ, ವರಾಹಸಂದ್ರ, ಕೆಂಗೇರಿ ಗೊಲ್ಲಹಳ್ಳಿ, ಬಡಾಮುನವಾರ್ತೆ ಕಾವಲ್, ದೇವಗೆರೆ, ಗುಡಿಮಾವು, ಕಂಬೀಪುರ, ಗಂಗಸಂದ್ರ, ಗೋಣಿಪುರ, ತಿಪ್ಪೂರು, ಸೀಗೇಹಳ್ಳಿ, ಕೊಡಿಯಾಲ ಕರೇನಹಳ್ಳಿ ಹಾಗೂ ದೊಡ್ಡಕುಂಟನಹಳ್ಳಿ ಗ್ರಾಮದ ರೈತರಿಂದನೈಸ್ ಕಂಪನಿ ಹಾಗೂ ಕೆಐಎಡಿಬಿ ಅಧಿಕಾರಿಗಳು ಅನಧಿಕೃತವಾಗಿ ಜಮೀನು ಖರೀದಿಸುತ್ತಿದ್ದಾರೆ. ಹಲವು ರೈತರಿಗೆ ಪರಿಹಾರಧನವನ್ನೇ ವಿತರಿಸಿಲ್ಲ. ಈ ಕುರಿತು ರೈತರು ಅಳಲು ತೋಡಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.