ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರವಂ’ಗೆ ನ. 25ರಂದು ಚಾಲನೆ

Last Updated 24 ನವೆಂಬರ್ 2022, 11:16 IST
ಅಕ್ಷರ ಗಾತ್ರ

ಬೆಂಗಳೂರು: 6 ವರ್ಷಗಳ ಒಳಗಿನ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ಒದಗಿಸುವ ಯೋಜನೆ ‘ನೀರವಂ’ಗೆ ನ. 25ರಂದು ಚಾಲನೆ ದೊರೆಯಲಿದೆ.

ರೋಟರಿ ಜಿಲ್ಲೆ 3190ರ (ಬೆಂಗಳೂರು ದಕ್ಷಿಣ) ವತಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಮೆಂಟ್‌ ಆಸ್ಪತ್ರೆಯ ಸಭಾಂಗಣದಲ್ಲಿ ಈ ಯೋಜನೆಯ ಉದ್ಘಾಟನೆ ನಡೆಯಲಿದೆ.

ಸುವರ್ಣ ಆರೋಗ್ಯ ಸೇವಾ ಟ್ರಸ್ಟ್‌, ಅಂಗವಿಕಲರಿಗೆ ಅಗತ್ಯ ಸಲಕರಣೆಗಳ ಖರೀದಿಗೆ ನೀಡುವ ಸಹಾಯಧನ (ಎಡಿಐಪಿ) ಯೋಜನೆಯ ನೆರವಿನೊಂದಿಗೆ ‘ನೀರವಂ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕ್ಲಬ್‌ ಪ್ರಕಟಣೆ ಹೇಳಿದೆ.

ರೋಟರಿ ಜಿಲ್ಲಾ ಗವರ್ನರ್‌ ಜಿತೇಂದ್ರ ಅನೇಜಾ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಚುನಾಯಿತ ಗವರ್ನರ್‌ ಉದಯಕುಮಾರ್‌ ಭಾಸ್ಕರ ಅವರು ಈ ಯೋಜನೆಯ ಸಲಹೆಗಾರರಾಗಿದ್ದಾರೆ. ಮೆಂಟ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರದೀಪ್‌ ಕುಮಾರ್‌, ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ.ಶ್ರೇಯಸ್‌ ಪಿ. ಪ್ರದೀಪ್‌, ನೀರವಂ ರಾಯಭಾರಿಗಳಾದ ಪ್ರಜ್ವಲ್‌ ದೇವರಾಜ್‌, ರಾಗಿಣಿ ಚಂದ್ರನ್‌ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT