ರೋಟರಿ ಜಿಲ್ಲಾ ಗವರ್ನರ್ ಜಿತೇಂದ್ರ ಅನೇಜಾ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಚುನಾಯಿತ ಗವರ್ನರ್ ಉದಯಕುಮಾರ್ ಭಾಸ್ಕರ ಅವರು ಈ ಯೋಜನೆಯ ಸಲಹೆಗಾರರಾಗಿದ್ದಾರೆ. ಮೆಂಟ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರದೀಪ್ ಕುಮಾರ್, ಇಎನ್ಟಿ ಶಸ್ತ್ರಚಿಕಿತ್ಸಕ ಡಾ.ಶ್ರೇಯಸ್ ಪಿ. ಪ್ರದೀಪ್, ನೀರವಂ ರಾಯಭಾರಿಗಳಾದ ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.