‘ಬಂಗಾರಪೇಟೆ ತಾಲ್ಲೂಕಿನ ವೆಂಕಟರಾಮ್, ಪತ್ನಿ, ಮಗಳು ಹಾಗೂ ಮಗ ಚಂದ್ರಶೇಖರ್ ಜೊತೆ ರಂಗನಾಥ್ ಬಡಾವಣೆಯಲ್ಲಿ ವಾಸವಿದ್ದರು. ಚಂದ್ರಶೇಖರ್, ಕಾರು ಚಾಲಕ ಕೆಲಸ ಮಾಡುತ್ತಿ ದ್ದರು. ಮದ್ಯವ್ಯಸನಿ ಆಗಿದ್ದ ವೆಂಕಟ ರಾಮ್, ನಿತ್ಯವೂ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮದ್ಯ ಖರೀದಿಗೆ ಹಣ ನೀಡುವಂತೆಯೂ ಪತ್ನಿ–ಮಗನ ಜೊತೆ ಜಗಳ ತೆಗೆಯುತ್ತಿದ್ದ’ ಎಂದು ಪೊಲೀಸರು ಹೇಳಿದರು.