ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಕುಡಿಯಲು ಹಣ ಕೊಡದಿದ್ದಕ್ಕೆ ಮಗನ ಕೊಲೆಗೆ ಯತ್ನ

Last Updated 22 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ಕುಡಿಯಲು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಚಂದ್ರಶೇಖರ್ ರೆಡ್ಡಿ (24) ಎಂಬು ವವರನ್ನು ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿದ ಆರೋಪದಡಿ ತಂದೆ ವೆಂಕಟರಾಮ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.

‘ಬಂಗಾರಪೇಟೆ ತಾಲ್ಲೂಕಿನ ವೆಂಕಟರಾಮ್, ಪತ್ನಿ, ಮಗಳು ಹಾಗೂ ಮಗ ಚಂದ್ರಶೇಖರ್ ಜೊತೆ ರಂಗನಾಥ್ ಬಡಾವಣೆಯಲ್ಲಿ ವಾಸವಿದ್ದರು. ಚಂದ್ರಶೇಖರ್, ಕಾರು ಚಾಲಕ ಕೆಲಸ ಮಾಡುತ್ತಿ ದ್ದರು. ಮದ್ಯವ್ಯಸನಿ ಆಗಿದ್ದ ವೆಂಕಟ ರಾಮ್, ನಿತ್ಯವೂ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮದ್ಯ ಖರೀದಿಗೆ ಹಣ ನೀಡುವಂತೆಯೂ ಪತ್ನಿ–ಮಗನ ಜೊತೆ ಜಗಳ ತೆಗೆಯುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಡಿ. 17ರಂದು ಬೆಳಿಗ್ಗೆ ಮನೆಯಲ್ಲಿ ಗಲಾಟೆ ಮಾಡಿದ್ದ ವೆಂಕಟರಾಮ್, ಮದ್ಯ ಖರೀದಿಗೆ ಹಣ ನೀಡುವಂತೆ ಒತ್ತಾಯಿಸಿದ್ದ. ‍ಪತ್ನಿ–ಮಗ ಹಣ ನೀಡಿರಲಿಲ್ಲ. ರಂಪಾಟ ಮಾಡಿದ್ದ ವೆಂಕಟರಾಮ್, ಮನೆಯೊಳಗೆ ಸೇರಿ ಒಳಗಿನಿಂದ ಲಾಕ್ ಮಾಡಿಕೊಂಡಿದ್ದ. ಪತಿ ಹಾಗೂ ಮಕ್ಕಳು ಎಂದಿನಂತೆ ಕೆಲಸಕ್ಕೆ ಹೋಗಿ ಸಂಜೆ ವಾಪಸು ಬಂದಿದ್ದರು. ಅವಾಗಲೂ ಆರೋಪಿ ಲಾಕ್ ತೆಗೆದಿರಲಿಲ್ಲ. ಏನಾಯಿತೆಂದು ನೋಡಲು ಚಂದ್ರಶೇಖರ್, ಚಾವಣಿ ಮೂಲಕ ಮನೆಯೊಳಗೆ ಹೋಗಿದ್ದ.’

‘ಚಂದ್ರಶೇಖರ್‌ನನ್ನು ನೋಡಿ ಪುನಃ ಜಗಳ ತೆಗೆದಿದ್ದತಂದೆ ವೆಂಕಟರಾಮ್, ಮಚ್ಚಿನಿಂದ ತಲೆ ಹಾಗೂ ಕೈ–ಕಾಲಿಗೆ ಹೊಡೆದಿದ್ದ. ರಕ್ಷಣೆಗೆ ಹೋದ ಸ್ಥಳೀಯರು, ಚಂದ್ರಶೇಖರ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT