ಪ್ರೊ. ಜಿ.ಕೆ. ಗೋವಿಂದರಾವ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಿಂತಕರೊಬ್ಬರು ಅಲ್ಲಮನ ವಚನವನ್ನು: ‘ಪೃಥ್ವಿಗೆ ಹುಟ್ಟಿ ಶಿಲೆಯಾದ, ಅಕ್ಕಸಾಲಿಗನ ಕೈಯಲ್ಲಿ ಮೂರ್ತಿಯಾದ, ಆಚಾರ್ಯನ ಕೈಯಲ್ಲಿ ಲಿಂಗವಾದ ಈ ಮೂವರಿಗೆ ಹುಟ್ಟಿದ ಸೂಳೆಯ ಮಗನ ನಾ ಹೇಗೆ ಪೂಜಿಸಲಯ್ಯ ಗುಹೇಶ್ವರ!’ ಎಂದು ಉದ್ಧರಿಸಿದ್ದರು (ಪ್ರ.ವಾ., ಏ.23). ಆದರೆ ಆ ವಚನದ ಮೂಲಪಾಠದಲ್ಲಿ ‘ಸೂಳೆ’ ಎಂಬ ಪದವಿಲ್ಲ. (ಮೂಲಪಾಠ: ಪೃಥ್ವಿಗೆ ಹುಟ್ಟಿದ ಶಿಲೆ, ಕಲುಕುಟ್ಟಿಗಂಗೆ ಹುಟ್ಟಿದ ಮೂರುತಿ, ಮಂತ್ರಕ್ಕೆ ಲಿಂಗವಾಯಿತ್ತಲ್ಲಾ! ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿವ, ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರಾ– ಅಲ್ಲಮನ ವಚನ ಚಂದ್ರಿಕೆ, ಸಂ: ಎಲ್. ಬಸವರಾಜು, ವಚನ ಸಂ. 209, 2001).