<p><strong>ಪೀಣ್ಯ ದಾಸರಹಳ್ಳಿ:</strong> ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇಕೊ ಗ್ರೀನ್ ಸಲ್ಯೂಷನ್ಸ್ ಸಿಸ್ಟಮ್, ತ್ಯಾಜ್ಯ ನೀರು ಸಂಸ್ಕರಣೆ ಘಟಕವನ್ನು ಸ್ಥಗಿತಗೊಳಿಸುವುದರಿಂದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು, ‘ಇಕೊ ಗ್ರೀನ್ ಸಲ್ಯೂಷನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನ ‘ಸಾಮಾನ್ಯ ತ್ಯಾಜ್ಯ ಸಂಸ್ಕರಣೆ ಘಟಕ’ವನ್ನು (ಸಿಇಟಿಪಿ) ಮಾರ್ಚ್ 15ರಿಂದ ಸ್ಥಗಿತಗೊಳಿಸುವುದಾಗಿ ಹೇಳೀದೆ. ಇದರಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಎದುರಿಸುತ್ತಿರುವ ಸಂಕಷ್ಟ ಗಂಭೀರವಾಗಲಿದೆ’ ಎಂದು ಹೇಳಿದ್ದಾರೆ.</p>.<p>‘ಕಾರ್ಯಾಚರಣಾ ಹಾಗೂ ಆಡಳಿತಾತ್ಮಕ ಅಡಚಣೆಗಳ ಕಾರಣದಿಂದ ವಾಣಿಜ್ಯ ತ್ಯಾಜ್ಯ ನೀರನ್ನು ಸ್ವೀಕರಿಸುವುದಿಲ್ಲ, ಶುದ್ದೀಕರಿಸುವುದಿಲ್ಲ’ ಎಂದು ಇಕೊ ಗ್ರೀನ್ ತನ್ನ ಸದಸ್ಯ ಕೈಗಾರಿಕೆಗಳಿಗೆ ತಿಳಿಸಿದೆ. ಈ ಘಟಕದ ಮುಚ್ಚುವುದರಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ತ್ಯಾಜ್ಯ ನೀರಿನ ವಿಲೇವಾರಿಯ ಸಂಕಷ್ಟ ಎದುರಾಗಲಿದೆ’ ಎಂದಿದ್ದಾರೆ.</p>.<p>‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪರ್ಯಾಯ ಸಿಇಒಟಿಪಿ ಇಲ್ಲ. ತ್ಯಾಜ್ಯ ನೀರನ್ನು ಬಿಡುಗಡೆ ಮಾಡಲು ಕೈಗಾರಿಕೆಗಳಿಗೆ ಯಾವುದೇ ಅಧಿಕೃತ ವ್ಯವಸ್ಥೆಯಿಲ್ಲ. ಕಾನೂನು ಹಾಗೂ ಪರಿಸರ ನಿಯಮಾವಳಿಗಳ ಕಾರಣದಿಂದ ತ್ಯಾಜ್ಯ ನೀರನ್ನು ಒಳಚರಂಡಿ ಅಥವಾ ರಾಜಕಾಲುವೆಗಳಿಗೆ ಬಿಡಲು ಸಾಧ್ಯವಿಲ್ಲ. ಹೀಗಾಗಿ ಸಮಸ್ಯೆಯಾಗಲಿದೆ. ಈ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ‘ಸರ್ಫೇಸ್ ಟ್ರೇಟ್ಮೆಂಟ್’ ಕೈಗಾರಿಕೆಗಳು ಮುಚ್ಚುವ ಭೀತಿ ಎದುರಾಗಿದೆ. ಇದರಿಂದ ಆರ್ಥಿಕ ನಷ್ಟ ಹಾಗೂ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.</p>
<p><strong>ಪೀಣ್ಯ ದಾಸರಹಳ್ಳಿ:</strong> ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇಕೊ ಗ್ರೀನ್ ಸಲ್ಯೂಷನ್ಸ್ ಸಿಸ್ಟಮ್, ತ್ಯಾಜ್ಯ ನೀರು ಸಂಸ್ಕರಣೆ ಘಟಕವನ್ನು ಸ್ಥಗಿತಗೊಳಿಸುವುದರಿಂದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು, ‘ಇಕೊ ಗ್ರೀನ್ ಸಲ್ಯೂಷನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನ ‘ಸಾಮಾನ್ಯ ತ್ಯಾಜ್ಯ ಸಂಸ್ಕರಣೆ ಘಟಕ’ವನ್ನು (ಸಿಇಟಿಪಿ) ಮಾರ್ಚ್ 15ರಿಂದ ಸ್ಥಗಿತಗೊಳಿಸುವುದಾಗಿ ಹೇಳೀದೆ. ಇದರಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಎದುರಿಸುತ್ತಿರುವ ಸಂಕಷ್ಟ ಗಂಭೀರವಾಗಲಿದೆ’ ಎಂದು ಹೇಳಿದ್ದಾರೆ.</p>.<p>‘ಕಾರ್ಯಾಚರಣಾ ಹಾಗೂ ಆಡಳಿತಾತ್ಮಕ ಅಡಚಣೆಗಳ ಕಾರಣದಿಂದ ವಾಣಿಜ್ಯ ತ್ಯಾಜ್ಯ ನೀರನ್ನು ಸ್ವೀಕರಿಸುವುದಿಲ್ಲ, ಶುದ್ದೀಕರಿಸುವುದಿಲ್ಲ’ ಎಂದು ಇಕೊ ಗ್ರೀನ್ ತನ್ನ ಸದಸ್ಯ ಕೈಗಾರಿಕೆಗಳಿಗೆ ತಿಳಿಸಿದೆ. ಈ ಘಟಕದ ಮುಚ್ಚುವುದರಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ತ್ಯಾಜ್ಯ ನೀರಿನ ವಿಲೇವಾರಿಯ ಸಂಕಷ್ಟ ಎದುರಾಗಲಿದೆ’ ಎಂದಿದ್ದಾರೆ.</p>.<p>‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪರ್ಯಾಯ ಸಿಇಒಟಿಪಿ ಇಲ್ಲ. ತ್ಯಾಜ್ಯ ನೀರನ್ನು ಬಿಡುಗಡೆ ಮಾಡಲು ಕೈಗಾರಿಕೆಗಳಿಗೆ ಯಾವುದೇ ಅಧಿಕೃತ ವ್ಯವಸ್ಥೆಯಿಲ್ಲ. ಕಾನೂನು ಹಾಗೂ ಪರಿಸರ ನಿಯಮಾವಳಿಗಳ ಕಾರಣದಿಂದ ತ್ಯಾಜ್ಯ ನೀರನ್ನು ಒಳಚರಂಡಿ ಅಥವಾ ರಾಜಕಾಲುವೆಗಳಿಗೆ ಬಿಡಲು ಸಾಧ್ಯವಿಲ್ಲ. ಹೀಗಾಗಿ ಸಮಸ್ಯೆಯಾಗಲಿದೆ. ಈ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ‘ಸರ್ಫೇಸ್ ಟ್ರೇಟ್ಮೆಂಟ್’ ಕೈಗಾರಿಕೆಗಳು ಮುಚ್ಚುವ ಭೀತಿ ಎದುರಾಗಿದೆ. ಇದರಿಂದ ಆರ್ಥಿಕ ನಷ್ಟ ಹಾಗೂ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.</p>