ಬೆಂಗಳೂರು:ಹನ್ನೆರಡು ದಿನಗಳ ಹಿಂದೆ ಇಹಲೋಕ ತ್ಯಜಿಸಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಆರಾಧನೋತ್ಸವ ಗುರುವಾರ ವಿದ್ಯಾಪೀಠದ ಆವರಣದಲ್ಲಿ ಆರಂಭವಾಗಿದೆ. ಮಾಧ್ವ ಸಂಪ್ರದಾಯದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಬೆಳಿಗ್ಗೆ ವಿರಾಜ ಹೋಮ ನಡೆಯಿತು.
ಇದೀಗ 24 ಮಂದಿ ವಿದ್ವಾಂಸರಿಂದ ಪುರಾಣಗಳ ವಾಚನ ನಡೆಯುತ್ತಿದೆ. ಬಳಿಕ 108 ಯತಿಗಳು, ಬ್ರಾಹ್ಮಣರ ಪಾದಪೂಜೆ ನಡೆಯಲಿದೆ. ಬೃಂದಾವನಕ್ಕೆ ಭಕ್ತರು ಬರತೊಡಗಿದ್ದು, ಧಾರ್ಮಿಕ ವಿಧಿವಿಧಾನಗಳ ಫೊಟೊ ಸೆರೆಹಿಡಿಯಲು, ವಿಡಿಯೊಚಿತ್ರೀಕರಿಸಲು ಅವಕಾಶ ನೀಡಿಲ್ಲ.
ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳೆಲ್ಲ ಇಂದೇ (ಗುರುವಾರ) ನಡೆಯಲಿವೆ. ಇದೇ 11ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.
ವಿಶ್ವೇಶ ತೀರ್ಥರ ಮೆಚ್ಚಿನ ತಾಳಮದ್ದಳೆ
ಪೇಜಾವರ ವಿಶ್ವೇಶ ತೀರ್ಥರಆರಾಧನೋತ್ಸವ ಪ್ರಯುಕ್ತ ಬುಧವಾರ ಮಧ್ಯರಾತ್ರಿಯಿಂದಲೇ ವಿದ್ಯಾಪೀಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಶ್ರೀಗಳಿಗೆ ಪ್ರಿಯವಾದ 'ನಚಿಕೇತ' ಯಕ್ಷಗಾನ ತಾಳಮದ್ದಳೆ ನಡೆಯಿತು. ಶ್ರಿ ಹರಿ ಆಚಾರ್ಯರು ಯಮನ ಪಾತ್ರದಲ್ಲಿ ಮತ್ತು ಕೃಷ್ಣಕುಮಾರ್ ಆಚಾರ್ಯರು ನಚಿಕೇತನ ಪಾತ್ರದಲ್ಲಿ ಶಾಸ್ತ್ರೀಯ ಸಂವಾದ ನಡೆಸಿಕೊಟ್ಟರು.
ಆರಾಧನೋತ್ಸವದಲ್ಲಿ ಉಡುಪಿ ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಗಳು, ಪೇಜಾವರ ಮಠದ ವಿಶ್ವ ಪ್ರಸನ್ನ ಶ್ರೀಗಳು, ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀಗಳು, ಸುಬ್ರಹ್ಮಣ್ಯ ಮಠದ
ವಿದ್ಯಾಪ್ರಸನ್ನ ಶ್ರೀಗಳು, ಸೋದೆ ಮಠದ ವಿಶ್ವವಲ್ಲಭ ಶ್ರೀಗಳು, ಭೀಮಸೇತು ಮುನಿವರದ ಮಠದ ರಘುವರೇಂಸ್ರ ತೀರ್ಥ ಶ್ರೀಗಳು, ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದಾರೆ.
‘ಪ್ರಜಾವಾಣಿ’ ಬರಹಗಳಲ್ಲಿ ಪೇಜಾವರಶ್ರೀ ನೆನಪು
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬಡವರ ಬಗೆಗೆ ಹೊಂದಿದ್ದ ಪ್ರೀತಿಗೆ ಭಕ್ತರು ಮನಸೋತಿದ್ದಾರೆ. ಬೃಂದಾವನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.#VishweshaTeerthaSwamiji #PejawarSeer #PejawarSwamiji #ವಿಶ್ವೇಶತೀರ್ಥಸ್ವಾಮೀಜಿhttps://t.co/uEX3H5HcA7
— ಪ್ರಜಾವಾಣಿ|Prajavani (@prajavani) January 7, 2020
‘ನಮಾಜ್ ಪವಿತ್ರಕಾರ್ಯ, ಕೆಲಸದ ಒತ್ತಡದಲ್ಲಿ ನಮಾಜ್ ನಿಲ್ಲಿಸಬೇಡ. ಪ್ರಾರ್ಥನೆ ಸಲ್ಲಿಸಲು ನನ್ನ ಅಭ್ಯಂತರವಿಲ್ಲ’ ಎಂದಿದ್ದರು ವಿಶ್ವೇಶತೀರ್ಥರು. #PejawarSeerhttps://t.co/D3ZR5Jl83r
— ಪ್ರಜಾವಾಣಿ|Prajavani (@prajavani) December 30, 2019
ಲೋಕವೇ ಅವರಿಗೆ ಇಷ್ಟದೈವ. ಲೋಕಶುಶ್ರೂಷೆಯೇ ಅವರಿಗೆ ಮುಖ್ಯವಾದ ಆರಾಧನೆ. #SocialLifeOfVishweshaTeertha #ಪೇಜಾವರಶ್ರೀ_ನೆನಪು https://t.co/dcYcipz78m
— ಪ್ರಜಾವಾಣಿ|Prajavani (@prajavani) December 30, 2019
ಶ್ರೀ ವಿಶ್ವೇಶತೀರ್ಥಶ್ರೀಪಾದರನ್ನು ಕಂಡರೆ, ನೆನೆದರೆ ನೆನಪಾಗುವುದು ಶ್ರೀಗಂಧದ ಕೊರಡು, ತಾನು ಸವೆದು ಜಗವೆಲ್ಲ ಪರಿಮಳ ಬೀರಿ, ಮತ್ತೆ ಭಗವದರ್ಪಿತವಾಗಿ ಜೀವನ ಸಾರ್ಥಕವಾಗುವ ಪರಿ. #PejawarSeerhttps://t.co/HBdEkIEi5h
— ಪ್ರಜಾವಾಣಿ|Prajavani (@prajavani) December 30, 2019
‘ಅಸಮಾನತೆ ಬಿಡಿ, ತಾರತಮ್ಯ ಮಾಡದೇ ಸಾಮರಸ್ಯದಿಂದ ಬದುಕಿ’ ಎಂದು ನೇರವಾಗಿ ಹೇಳುತ್ತಿದ್ದ ವ್ಯಕ್ತಿತ್ವ ವಿಶ್ವೇಶತೀರ್ಥರದ್ದು. #SocialLifeOfVishweshaTeertha #ಪೇಜಾವರಶ್ರೀ_ನೆನಪು #ಮಾದಾರ_ಚನ್ನಯ್ಯ_ಸ್ವಾಮೀಜಿhttps://t.co/mfGwCKcjfS
— ಪ್ರಜಾವಾಣಿ|Prajavani (@prajavani) December 30, 2019
‘ಹಿಂದು ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ ಶಾಸ್ತ್ರ ಸಮ್ಮತವೇ?’ –ಈ ಪ್ರಶ್ನೆಗೆ ಉತ್ತರ ಹುಡುಕುವುದೇ 1969ರ ಸಮ್ಮೇಳನದ ಉದ್ದೇವಾಗಿತ್ತು. ಶ#PejawarSeer #ಪೇಜಾವರ_ಶ್ರೀವಿಶ್ವೇಶತೀರ್ಥ_ಸ್ವಾಮೀಜಿhttps://t.co/zYlQDilpkZ
— ಪ್ರಜಾವಾಣಿ|Prajavani (@prajavani) December 30, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.