‘ಕಾಡು ನಮ್ಮನ್ನು ಮನುಷ್ಯರನ್ನಾಗಿಸಿ, ಓಡಲು, ಬದುಕಲು ಕಲಿಸಿದೆ. ಆದರೆ, ಇಂದು ಎತ್ತಿನಹೊಳೆ ಯೋಜನೆ ಮೂಲಕ ಪಶ್ಚಿಮಘಟ್ಟದ ಪರಿಸರವನ್ನು ಹಾಳುಗೆಡವಲು ಹೊರಟಿದ್ದಾರೆ. ಬಹುಪಾಲು ಜನರು ಬೇಕು ಎಂದ ಕಾರಣಕ್ಕೆ ಎತ್ತಿನಹೊಳೆ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಅಲ್ಲಿನ ಕಾಡು, ಗಿಡ, ಮರ, ಪ್ರಾಣಿಗಳ ಅಭಿಪ್ರಾಯಗಳನ್ನು ಸರ್ಕಾರ ಏಕೆ ಕೇಳಲಿಲ್ಲ’ ಎಂದು ಪ್ರಶ್ನಿಸಿದರು.