ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ, ‘ಅಥಣಿ ತಾಲ್ಲೂಕಿನ ತೀರ್ಥ, ಮಹಿಷವಾಡಗಿ, ಹಸಿರೇ ತೋಟ–ನಿಲಜಿ ಹಾಗೂ ಪೇರಲತೋಟ–ನದಿಇಂಗಳಗಾಂವ್ಗಳಲ್ಲಿ ಶಾಲೆಗಳಹೊಸ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ಮುಧೋಳ ತಾಲ್ಲೂಕಿನ ಒಂಟಗೋಡಿ, ಬಿ.ಕೆ.ಬುದ್ನಿ (ಇಲ್ಲಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ) ಮತ್ತು ಬಾದಾಮಿಯ ಕರ್ಲಕೊಪ್ಪದ ಶಾಲೆಗಳನ್ನು ನವೀಕರಣ ಮಾಡಿದ್ದೇವೆ. ಇದಕ್ಕಾಗಿ ಒಟ್ಟು ₹4.31 ಕೋಟಿ ಮೊತ್ತ ವಿನಿಯೋಗಿಸಿದ್ದೇವೆ. ಪೀಠೋಪಕರಣ, ಕಂಪ್ಯೂಟರ್, ಪುಸ್ತಕ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸಲು ₹1.5 ಕೋಟಿ ಹೆಚ್ಚುವರಿ ವೆಚ್ಚ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.