‘ಕೆಸರಿನಲ್ಲಿ ಹೊರಳಾಡಿಕೊಂಡು ಬರುವ ಹಂದಿಗಳು ಮನೆಗಳ ಮುಂದೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ಗುದ್ದಿ ಬೀಳಿಸುವುದರ ಜೊತೆಗೆ, ತೊಳೆದು ನಿಲ್ಲಿಸಿರುವ ವಾಹನಗಳಿಗೆ ಮೈ ಉಜ್ಜುವುದರಿಂದ ವಾಹನಗಳಿಗೆ ಕೆಸರು ಅಂಟಿಕೊಳ್ಳುತ್ತಿದೆ. ಪ್ರತಿದಿನ 12 ರಿಂದ 14 ಹಂದಿಗಳ ತಂಡ, ಬಡಾವಣೆಯ ರಸ್ತೆ, ಚರಂಡಿಗಳಲ್ಲಿ ಸಂಚರಿಸುತ್ತದೆ. ಇವುಗಳ ಓಡಾಟದ ರಭಸಕ್ಕೆ ಚರಂಡಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವೆಲ್ಲಾ ರಸ್ತೆಯ ಮೇಲೆ ಹರಡುತ್ತಿದೆ’ ಎಂದು ಕೊಂಡಪ್ಪ ಬಡಾವಣೆ ನಿವಾಸಿ ವೆಂಕಟೇಶ್ ದೂರಿದರು.