‘3–4 ಮಕ್ಕಳಿಗೆ ವಾಂತಿ–ಭೇದಿ ಆಗುತ್ತಿತ್ತು. ಇದ್ದಕ್ಕಿದ್ದಂತೆ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಯಿತು. ಗಬ್ಬು ವಾಸನೆ ಬೀರಲು ಶುರುವಾಯಿತು. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ, ಕ್ವಾರಿಯಲ್ಲಿ ಕಸ ಸುರಿದು, ಅದರ ಮೇಲೆ ಮಣ್ಣು ಮುಚ್ಚಿ ಹೋಗುತ್ತಿದ್ದುದು ಗಮನಕ್ಕೆ ಬಂತು. ಇದನ್ನು ಪತ್ತೆ ಹಚ್ಚಲು ಕೆಲವು ದಿನಗಳ ಹಿಂದೆ ಕಾವಲು ಕಾದರೂ ಪ್ರಯೋಜನ ಆಗಿರಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.