ಹದಗೆಟ್ಟ ಮತ್ತು ಅಡಿಗಡಿಗೆ ಗುಂಡಿಬಿದ್ದ ರಸ್ತೆಗಳ ಪರಿಣಾಮ ಬೆಂಗಳೂರಿನಲ್ಲಿ ವಾಹನ ಸಂಚಾರಕ್ಕೆ ಹರಸಾಹಸವನ್ನೇ ಮಾಡಬೇಕಾಗಿದೆ. ಗುಂಡಿ ಗಂಡಾಂತರದಿಂದ ವರ್ಷದಲ್ಲಿ ಐವರು ಸಾವಿಗೀಡಾಗಿದ್ದಾರೆ. ಐದು ವರ್ಷಗಳಲ್ಲಿ ಬೆಂಗಳೂರು ರಸ್ತೆ ಅಭಿವೃದ್ಧಿಗಾಗಿಯೇ ₹20,060 ಕೋಟಿ ಖರ್ಚು ಮಾಡಲಾಗಿದೆ ಎಂದು ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಹೇಳಿದ್ದರು. ಆದರೂ, ಬೆಂಗಳೂರಿನಲ್ಲಿ ಸಾವಿರಾರು ರಸ್ತೆ ಗುಂಡಿಗಳಿವೆ. ಇಂಥಾ ರಸ್ತೆಗಾಗಿಯೇ ನಾವು ತೆರಿಗೆ ಕಟ್ಟುತ್ತಿರುವುದು ಎಂದು ಪ್ರಶ್ನಿಸುತ್ತಿದ್ದಾರೆ ಬೆಂಗಳೂರು ನಾಗರಿಕರು.