ಇದು ಪ್ರತಿಪಕ್ಷಗಳನ್ನು ಬೆದರಿಸುವ ಮಾತು. ಸರ್ವಾಧಿಕಾರಿ ಪ್ರವೃತ್ತಿಯ ಮಾತು. ಮೋದಿ ಅವರಿಗೆ ಇದು ಹೊಸದಲ್ಲ; ಈಚೆಗೆ ಅವರು ಚುನಾವಣಾ ಭಾಷಣದಲ್ಲಿ ‘ಕಾಂಗ್ರೆಸ್ ಕೆ ನೇತಾ ಕಾನ್ ಖೋಲ್ ಕೆ ಸುನ್ ಲೀಜಿಯೇ, ಅಗರ್ ಸಿಮಾಯೊ ಕೊ ಪಾರ್ ಕರೋಗಿ, ತೋ ಯೇ ಮೋದಿ ಹೈ, ಲೇನೆ ಕೆ ದೇನೆ ಪಡ ಜಾಯೆಂಗೇ’ (ಕಾಂಗ್ರೆಸ್ ನಾಯಕರು ಕಿವಿ ತೆರೆದು ನನ್ನ ಮಾತುಗಳನ್ನು ಕೇಳಬೇಕು, ನೀವು ಮಿತಿಮೀರಿದರೆ, ನೆನಪಿಡಿ, ಇಲ್ಲಿರುವುದು ಮೋದಿ, ನೀವು ಇದರ ಪರಿಣಾಮವನ್ನು ಎದುರಿಸಬೇಕಾದೀತು) ಎಂದು ಬೆದರಿಸಿದರು. ಹಿಂದಿ ಮಸಾಲೆ ಸಿನಿಮಾಗಳಲ್ಲಿ ಪಾತ್ರಗಳಾಡುವ ‘ಉಲ್ಲುಕೆ ಪಟ್ಟೆ’, ‘ಬದ್ಮಾಶ್’ ಮುಂತಾದ ಮುತ್ತುಗಳು ಯವಾಗ ಬಂದಾವೋ ಎಂದು ನಿರೀಕ್ಷಿಸುವ ಸ್ಥಿತಿ ಬಂದಿದೆ.